Crime

ಬೆಂಗಳೂರಿಗೆ ಬಂಗಾರ, ವಜ್ರಗಳ ಕಳ್ಳಸಾಗಾಣೆ-SEB ಪೊಲೀಸರಿಂದ ಯುವಕನ ಬಂಧನ

ಕರ್ನೂಲ್:‌ ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಭಾರೀ ಪ್ರಮಾಣದ ಚಿನ್ನಾಭರಣ ಹಾಗೂ ವಜ್ರಗಳನ್ನು ಸಾಗಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನೂಲ್ ವಲಯದಲ್ಲಿನ ಪಂಚಲಿಂಗ ಚೆಕ್ ಪೋಸ್ಟ್ ಬಳಿ ಎಸ್‌ಇಬಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕಳ್ಳಸಾಗಾಣಿಕೆ ಬಗ್ಗೆ ತಿಳಿದುಬಂದಿದೆ.

ಹೈದರಾಬಾದ್ ನಿಂದ ಬೆಂಗಳೂರಿಗೆ ಖಾಸಗಿ ಟ್ರಾವೆಲ್ಸ್ ಬಸ್ ನಲ್ಲಿ ಪ್ರಯಾನೀಸುತ್ತಿದ್ದ ರಾಜಸ್ಥಾನದ ಜಂಜು ಮೂಲದ ಯುವಕ ಕಪಿಲ್ ತನ್ನ ಬ್ಯಾಗ್ ನಲ್ಲಿ 840 ಗ್ರಾಂ ಚಿನ್ನಾಭರಣ ಹಾಗೂ 57 ವಜ್ರಗಳನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ.

ಚೆಕ್ ಪೋಸ್ಟ್ ನಲ್ಲಿ ಎಸ್ಇಬಿ ಸಿಬ್ಬಂದಿ ನಡೆಸಿದ ತಪಾಸಣೆಯಲ್ಲಿ ಇವು ಪತ್ತೆಯಾಗಿವೆ. ಬಿಲ್‌ಗಳು ಮತ್ತು ಜಿಎಸ್‌ಟಿ ಟ್ಯಾಗ್‌ಗಳ ಕೊರತೆಯಿಂದಾಗಿ ಕಪಿಲ್‌ನನ್ನು ವಿಚಾರಣೆಗಾಗಿ ಕರ್ನೂಲ್ ನಗರ ತಾಲೂಕು ಪೊಲೀಸರಿಗೆ ಒಪ್ಪಿಸಲಾಗಿದೆ. ಆರೋಪಿಯಿಂದ ವಜ್ರ ಹಾಗೂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

Share Post