Districts

ಶಿವಮೊಗ್ಗದಲ್ಲಿ ನಾಳೆಯಿಂದ ಶಾಲಾ-ಕಾಲೇಜು ಆರಂಭ-ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಉದ್ವಿಗ್ನ ವಾತಾರವರಣ ಉಂಟಾಗಿದ್ದ ಕಾರಣ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರ ಆದೇಶದಿಂದ 144 ಸೆಕ್ಷನ್‌ ಜಾರಿಯಾಗಿತ್ತು. ಇದೀಗ ಪರಿಸ್ಥಿತಿ ತಿಳಿಯಾದ ಕಾರಣ, ಶಿವಮೊಗ್ಗ ನಗರ ಶಾಂತಿಯುತವಾಗಿರುವುದರಿಂದ್ ನಿಷೇಧಾಜ್ಞೆಯನ್ನು ವಾಪಸ್‌ ಪಡೆಯಲಾಗಿದೆ. ನಾಳೆಯಿಂದ ಎಂದಿನಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ರು.

ಬಂದ್‌ ಆಗಿದ್ದ ಶಾಲಾ-ಕಾಲೇಜು ಕೂಡ ನಾಳೆಯಿಂದ ತೆರೆಯಲಿವೆ. ಹಿಜಾಬ್‌ ವಿವಾದ, ಹರ್ಷನ ಕೊಲೆಯಿಂದಾಗಿ ಗದ್ದಲ, ಗಲಭೆಗಳಿಂದ ಶಿವಮೊಗ್ಗ ನಗರ ಅಲ್ಲೋಲ-ಕಲ್ಲೋಲವಾಗಿತ್ತು ಇದೀಗ ಪರಿಸ್ಥಿತಿ ಶಾಂತವಾಗಿರುವುದರಿಂದ ನಾಳೆಯಿಂದ ಶಾಲೆ-ಕಾಳೇಜುಗಳನ್ನು ತೆರೆಯಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

Share Post