CrimeNational

ಓವೈಸಿ ದ್ವೇಷದ ಭಾಷಣಕ್ಕೆ ಬೇಸತ್ತು ಕೊಲೆ ಸಂಚು: ಸತ್ಯ ಬಾಯ್ಬಿಟ್ಟ ಆರೋಪಿಗಳು

ಉತ್ತರಪ್ರದೇಶ: ಎಂಐಎಂ ಮುಖ್ಯಸ್ತ ಹಾಗೂ ಸಂಸದ ಅಸಾದುದ್ದೀನ್‌ ಒವೈಸಿ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಎಂಟು ಗಂಟೆಗಳ ಕಾಲ ಆರೋಪಿಗಳನ್ನು ವಿಚಾರನೆ ನಡೆಸಲಾಗಿದೆ. ಸಚಿನ್‌ ಹಾಗೂ ಶುಭಂ ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು ಆರೋಪಿಗಳ ಜನ್ಮ ಜಾಲಾಡಿದ್ದಾರೆ. ವಿಚಾರಣೆ ವೇಳೆ ಹತ್ಯೆ ಯತ್ನ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಒವೈಸಿ ಮೇಲೆ ದಾಳಿ ಯತ್ನದಲ್ಲಿ ನಾವಿಬ್ಬರು ಬಿಟ್ಟರೆ ಯಾರೂ ಇಲ್ಲ. ಅವರ ದ್ವೇಷದ ಭಾಚಣದಿಂದ ಬೇಸತ್ತು ಕೊಲೆಗೆ ಸಂಚು ರೂಪಿಸಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಹಳ ದಿನಗಳಿಂದ ದಾಳಿಗೆ ಸಿದ್ಧತೆ ನಡೆಸಿದ್ವಿ, ಕಳೆದ ಹದಿನೈದು ದಿನಗಳಿಂದ ಒವೈಸಿಯನ್ನು ಹಿಂಬಾಲಿಸಿದ್ವಿ. ಉತ್ತರ ಪ್ರದೇಶದ ಮೀರತ್‌ಗೆ ತೆರಳಿದ್ದಾಗ ದಾಳಿಗೆ ಪ್ರಯತ್ನ ಮಾಡಲಾಗಿತ್ತು, ಆದರೆ ಜನದಟ್ಟಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ನಂತರ ಹಾಪುರದ ಟೋಲ್‌ ಪ್ಲಾಜಾ ಬಳಿ ದಾಳಿ ಮಾಡಲಾಯಿತು ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

Share Post