Districts

ವಿದ್ಯಾರ್ಥಿಗಳು ಹಿಜಾಬ್‌ ಧರಿಸಲು ವಾಟಾಳ್‌ ನಾಗರಾಜ್‌ ಬೆಂಬಲ

ಮೈಸೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ವಿವಾದ ತಲೆಯೆತ್ತಿದೆ. ಈ ನಡುವೆ ಹಿಜಾಬ್‌ ಪರವಾಗಿ ವಾಟಾಳ್‌ ನಾಗರಾಜ್‌ ಬ್ಯಾಟ್‌ ಬೀಸಿದ್ದಾರೆ. ವಿದ್ಯಾರ್ಥಿಗಳ ಹಿಜಾಬ್‌ ಧರಿಸುವ ವಿಚಾರದಲ್ಲಿ ರಾಜಕಾರಣ ಸರಿಯಲ್ಲ ಎಂದಿದ್ದಾರೆ. ಮಕ್ಕಳಿಗೆ ಯಾವುದೇ ರೀತಿಯ ರಾಜಕೀಯ ಇಲ್ಲ, ಧರ್ಮ ಇಲ್ಲ. ಇದು ತೀಟೆ ಜಗಳ ಎಂದು ವಾಟಾಲ್‌ ನಾಗರಾಜ್‌ ಕಿಡಿ ಕಾರಿದ್ದಾರೆ.

ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು ಮಕ್ಕಳು ಹಿಜಾಬ್‌ ಧರಿಸಿ ಶಾಲೆಗೆ ಬರುತ್ತಿರುವುದ ಹೊಸದೇನಲ್ಲ ಆದ್ರೆ ಕೇಸರಿ  ಶಾಲು ಧರಿಸಿ ಕಾಲೇಜಿಗೆ ಬರುವ ರೂಢಿ ಯಾವಾಗಿಂದ ಇದೆ ಎಂದು ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಪ್ರಶ್ನಿಸಿದ್ದಾರೆ.

Share Post