Districts

ಮನೆ ಹಂಚಿಕೆ ವಿಚಾರಕ್ಕೆ ಜಗಳ; ಚೇರುಗಳಿಂದ ಬಡಿದಾಡಿಕೊಂಡ ಕಾರ್ಯಕರ್ತರು

ಮೈಸೂರು; ಮನೆ ಹಂಚಿಕೆ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಬಡಿದಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಾಡ್ಯದಲ್ಲಿ ನಡೆದಿದೆ. ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆ ವೇಳೆ ಘಟನೆ ನಡೆದಿದ್ದು, ಕೆಲವರಿಗೆ ರಕ್ತ ಬರುವ ರೀತಿಯಲ್ಲಿ ಹೊಡೆಯಲಾಗಿದೆ.

ಬಿಜೆಪಿಯ ವೀರಭದ್ರಪ್ಪ ಹಾಗೂ ಕಾಂಗ್ರೆಸ್‌ನ ರಾಜ ಎಂಬುವವರ ನಡುವೆ ಮೊದಲ ಮಾತಿನಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ, ಎರಡು ಗುಂಪುಗಳೋ ನಡವೆ ಹೊಡೆದಾಟ ನಡೆದಿದೆ. ಚೇರ್‌ಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಎರಡೂ ಕಡೆಯ ಹಲವರಿಗೆ ಗಾಯಗಳಾಗಿವೆ. ಕೆಲವರಿಗೆ ತಲೆಬುರುಡೆಗೆ ಗಂಭೀರವಾಗಿ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

 

Share Post