Cinema

ಧನುಷ್‌-ಐಶ್ವರ್ಯ ಡಿವೋರ್ಸ್‌ ಇಲ್ಲ; ಗಂಡ-ಹೆಂಡತಿ ಜಗಳವಷ್ಟೇ ಎಂದ ಕಸ್ತೂರಿ ರಾಜಾ

ಚೆನ್ನೈ: ನಟ ಧನುಷ್‌ ಹಾಗೂ ರಜನಿಕಾಂತ್‌ ಪುತ್ರಿ ಐಶ್ವರ್ಯಾ ವಿವಾಹ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದ್ರೆ ಇದನ್ನು ನಟ ಧನುಷ್‌ ತಂದೆ ಹಾಗೂ ಚಿತ್ರ ನಿರ್ದೇಶಕ ಕಸ್ತೂರಿ ರಾಜಾ ಅಲ್ಲಗೆಳೆದಿದ್ದಾರೆ.

ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಸ್ತೂರಿ ರಾಜಾ, ಎಲ್ಲರ ಮನೆಯಲ್ಲೂ ಇರುವಂತೆ ಇದು ಗಂಡ-ಹೆಂಡರಿ ಜಗಳವಷ್ಟೇ. ಅದನ್ನು ಕುಟುಂಬದ ಸದಸ್ಯರು ಸೇರಿ ಪರಿಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಸದ್ಯ ಧನುಷ್‌ ಹಾಗೂ ಐಶ್ವರ್ಯಾ ಚೆನ್ನೈನಲ್ಲಿ ಇಲ್ಲ. ಅವರಿಬ್ಬರೂ ಹೈದರಾಬಾದ್‌ನಲ್ಲಿ ಇದ್ದಾರೆ. ವಿವಾಹ ವಿಚ್ಛೇದನ ಸುದ್ದಿ ಕೇಳಿಬಂದಾಗ ನಾನು ಇಬ್ಬರೊಂದಿಗೂ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಇದೊಂದು ಕೌಟುಂಬಿಕ ಮನಸ್ತಾಪ ಅಷ್ಟೇ. ಇಬ್ಬರೂ ಬೇರೆಯಾಗಿಲ್ಲ. ಬೇರೆ ಆಗುವುದೂ ಇಲ್ಲ ಎಂದು ಧನುಷ್‌ ತಂದೆ ಕಸ್ತೂರಿ ರಾಜಾ ಹೇಳಿದ್ದಾರೆ.

ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ಅವರನ್ನು 2004ರ ನವೆಂಬರ್‌ 18 ರಂದು ವಿವಾಹವಾಗಿದ್ದರು. ಆದ್ರೆ ಇತ್ತೀಚೆಗೆ ಇಬ್ಬರೂ ಬೇರೆಯಾಗುತ್ತಿರುವ ಬಗ್ಗೆ ಟ್ವಿಟರ್‌ನಲ್ಲಿ ಬಹಿರಂಗಪಡಿಸಲಾಗಿತ್ತು. ಆದ್ರೆ, ಧನುಷ್‌ ತಂದೆ ಇಬ್ಬರನ್ನೂ ಒಂದುಗೂಡಿಸುವ ಮಾತನ್ನಾಡಿದ್ದಾರೆ.

Share Post