DistrictsPolitics

ಟೆಂಟ್ ನಲ್ಲಿ ಗೊಂಬೆ ಇಟ್ಟು ರಾಮ ರಾಮ ಎನ್ನುತ್ತಿದ್ದರು; ಸಚಿವ ರಾಜಣ್ಣ ವಿವಾದ

ತುಮಕೂರು; ಬಾಬ್ರಿ‌ ಮಸೀದಿ ಕೆಡವಿದ ನಂತರ ನಾನು ಅಲ್ಲಿಗೆ ಹೋಗಿದ್ದೆ. ಅಲ್ಲಿ ಟೆಂಟ್ ಒಂದರಲ್ಲಿ ಎರಡು ಗೊಂಬೆ ಇಟ್ಟು ರಾಮ ರಾಮ ಎನ್ನುತ್ತಿದ್ದರು ಎಂದು ಸಚಿವ ಕೆ.ಎನ್.ರಾಜಣ್ಣ ವಿವಾದಿತ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯಲ್ಲಿ ಅವರು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

 

ಟೆಂಟ್ ನಲ್ಲಿ ಎರಡು ಗೊಂಬೆಗಳಿದ್ದವು. ಅಲ್ಲಿ ಭಕ್ತರು ರಾಮ ರಾಮ ಎನ್ನುತ್ತಿದ್ದರು. ಆದ್ರೆ ನಮ್ಮೂರಿನ ದೇವಸ್ಥಾನಗಳಿಗೆ ಹೋದಾಗ ಸಿಗುವ ಭಕ್ತಿಯ ಅನುಭೂತಿ ಅಲ್ಲಿ ಸಿಗಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲಿಲ್ಲ ಎನ್ನುವ ಮೂಲಕ ಸಚಿವ ರಾಜಣ್ಣ ವಿವಾದಕ್ಕೆ ಕಾರಣರಾಗಿದ್ದಾರೆ.

 

ನಮ್ಮಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಅನೇಕ ರಾಮ ದೇಗುಲಗಳಿವೆ. ಆದರೆ, ಬಿಜೆಪಿ ಚುನಾವಣೆಗಾಗಿ ದೇಗುಲ ಕಟ್ಟುತ್ತಿದೆ ಎಂದೂ ರಾಜಣ್ಣ ಆರೋಪ ಮಾಡಿದ್ದಾರೆ.

Share Post