DistrictsPolitics

ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರಾ..?

ಹಾಸನ; ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಡಿಮೆ ಸ್ಥಾನ‌‌ ಬಂದರೆ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಉಳಿಯೋದಿಲ್ಲವೆ? ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದರೆ ಮಾತ್ರ ಅವರು 5 ವರ್ಷ ಸಿಎಂ ಆಗಿರುತ್ತಾರಾ..? ಸಿಎಂ ಪುತ್ರ ಯತೀಂದ್ರ ಅವರೇ ಇಂತಹದ್ದೊಂದು ವಿಚಾರ ಬಾಯ್ಬಿಟ್ಟಿದ್ದಾರೆ. ಇದನ್ನು ನೋಡಿದರೆ ಸಚಿವರ ಜೊತೆಗೆ ಸಿಎಂಗೂ ಹೈಕಮಾಂಡ್ ಟಾಸ್ಕ್ ನೀಡಿದಂತೆ ಕಾಣುತ್ತಿದೆ.

 

  ಹಾಸನದಲ್ಲಿ ಮಾತನಾಡಿರುವ ಸಿಎಂ ಪುತ್ರ ಯತೀಂದ್ರ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್  ಪಕ್ಷವು ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದಿದ್ದಾರೆ. ಇದರ ಅರ್ಥ ಹೆಚ್ಚಿನ ಸ್ಥಾನ ಗೆಲ್ಲದಿದ್ದರೆ ಅವರ ಸ್ಥಾನಕ್ಕೆ ಕಂಟಕವಿದೆ ಎಂದೇ ಅರ್ಥ.

 

ಸಿದ್ರಾಮಯ್ಯ ನೇತೃತ್ವದಲ್ಲಿಯೇ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎದುರಿಸಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ‌ಗೆಲ್ಲಬೇಕು. ಆಗ ಸಿದ್ದರಾಮಯ್ಯ ಅವರು ಅಡೆತಡೆ ಇಲ್ಲದೆ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

Share Post