Politics

ಅಯೋಗ್ಯನ ಜೊತೆ ನಾನ್‌ ಸೇರಲ್ಲ : ಮುರುಗೇಶ್‌ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ

ಬೆಳಗಾವಿ : ಮುರುಗೇಶ್‌ ನಿರಾಣಿ ವಿರುದ್ಧ ಬಸನಗೌಡ ಪಾಟೀಲ್‌ ಮತ್ತೊಮ್ಮೆ ವಾಗ್ವಾದ ನಡೆಸಿದ್ದಾರೆ. ದುಬಾರಿ ಗಿಫ್ಟ್‌ ಕೊಡೋರನ್ನೆಲ್ಲಾ ಸಿಎಂ ಮಾಡಲ್ಲ. ನಾನು ಅಂತಹ ಅಯೋಗ್ಯನ ಜೊತೆ ನಾನ್‌ ಸೇರಲ್ಲ ಎಂದು ಯತ್ನಾಳ್‌ ಪರೋಕ್ಷವಾಗಿ ಮುರುಗೇಶ್‌ ನಿರಾಣಿ ಅವರಿಗೆ ಹೇಳಿದ್ದಾರೆ.

ಈಶ್ವರಪ್ಪ, ಮುರುಗೇಶ್‌ ನಿರಾಣಿ, ಯತ್ನಾಳ್‌ ಸಂಧಾನ ಸಭೆ ವಿಚಾರವಾಗಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಯತ್ನಾಳ್‌, ಭೋಗದ ವಸ್ತುಗಳನ್ನು ನೀಡಿ ಸಿಎಂ ಆಗಬಹುದು ಎಂದು ಹಗಲು ಕನಸು ಕಾಣ್ತಿದ್ದಾರೆ. ಆದರೆ ಅದು ಆಗಲ್ಲ. ಕೆಲವರು ಸೂಟು ಹೊಲಿಸಿಕೊಂಡು ಕಾಯ್ದು ಕುಂತಿದ್ದಾರೆ.

ದೊಡ್ಡವರಿಗೆ ಹಣ ಕೊಟ್ಟರೆ ಕೆಲಸ ಆಗುತ್ತೆ. ನಾನು ಬುಕ್ ಮಾಡಿದ್ದೇನೆ ಅಂತಿದ್ದಾರೆ. ಜನವರಿ 2ನೇ ವಾರದಲ್ಲಿ ಸಿಎಂ ಆಗುತ್ತೇನೆಂದು ಕನಸು ಕಾಣುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಅವರ ಆಸೆಗಳು ಈಡೇರುವುದಿಲ್ಲ. ಸದ್ಯ ಸಿಎಂ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ಇಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ.

ಮಂತ್ರಿ ಮಾಡ್ತೇನೆ, ಡಿಸಿಎಂ ಮಾಡ್ತೇನೆ ಎಂದು ನನಗೆ ಆಮಿಷ ಒಡ್ಡುತ್ತಿದ್ದಾರೆ. ಇದಕ್ಕೆಲ್ಲಾ ಬೆಲೆ ಕೊಡುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ

Share Post