Politics

ಮುರುಗೇಶ್‌ ನಿರಾಣಿಯನ್ನು ಪರೋಕ್ಷವಾಗಿ ಟೀಕಿಸಿದ ಬಸನಗೌಡ ಪಾಟೀಲ್

ಬೆಳಗಾವಿ : “ಒಬ್ಬ ವ್ಯಕ್ತಿ ಜನವರಿ ೧೪ರ ನಂತರ ನಾನು ಮುಖ್ಯಮಂತ್ರಿ ಆಗ್ತೀನಿ ಅಂತ ಹೇಳಿಕೊಂಡು ಹುಚ್ಚನಂತೆ ಓಡಾಡ್ತಿದ್ದಾನೆ” ಎಂದು ಶಾಸಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಮುರುಗೇಶ್‌ ನಿರಾಣಿಯನ್ನು ಟೀಕಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್‌ ಅವರು ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ಮಹಾನ್‌ ನಾಯಕರನ್ನು ನಾನು ಸಂತೃಪ್ತಿಪಡಿಸಿದ್ದೇನೆ ಹೀಗಾಗಿ ನಾನೇ ಸಿಎಂ ಆಗ್ತೀನಿ ಅಂತ ಹೇಳ್ಕೊಂಡು ಓಡಾಡ್ತಿದ್ದಾರೆ. ಆದರೆ ನಮ್ಮ ಪ್ರಧಾನಿ ಮೋದಿ ತುಂಬಾ ಗಟ್ಟಿಯಾಗಿದ್ದಾರೆ. ಅವರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ. ಈ ರೀತಿ ಮಾತನಾಡೋರ ಬಾಯಿಗೆ ಬೀಗ ಹಾಕಬೇಕು ಎಂದು ಯತ್ನಾಳ್‌ ಕಿಡಿ ಕಾರಿದರು .

Share Post