Bengaluru

ಬಲವಂತದ ಮತಾಂತರಕ್ಕೆ ಈಗಿರುವ ಕಾನೂನಿನಲ್ಲಿ ಅವಕಾಶವಿಲ್ಲ

ಬೆಂಗಳೂರು: ಮತಾಂತರ ಕುರಿತು ಕಾರ್ಯಧ್ಯಕ್ಷ ಆರ್‌. ಧ್ರುವನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಬಲವಂತದ ಮತಾಂತರಕ್ಕೆ ಈಗಿರುವ ಕಾನೂನಿನಲ್ಲಿ ಅವಕಾಶವಿಲ್ಲ. ಈಗಿರುವ ಕಾಯ್ದೆ ಜೊತೆ ಮತ್ತೊಂದು ಕಾಯ್ದೆ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ. ನಮ್ಮ ಕಡೆ ಮುಂದುವರಿದವರು, ಹಿಂದುಳಿದವರು ಮತಾಂತರ ಹೊಂದಿದ್ದವರು. ಇನ್ನು ಡಾ. ಅಂಬೇಡ್ಕರ್‌ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದರು. ಜೊತೆಗೆ ೭ ಲಕ್ಷ ಜನರು ಬೌದ್ಧ ಧರ್ಮ ಸ್ವೀಕರಿಸಿದ್ದವರು. ಯಾವ ಧರ್ಮದಲ್ಲಿ ಸಮಾನತೆ ಇದಯೋ ಅಲ್ಲಿಗೆ ಹೋಗುತ್ತಾರೆ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಆರ್‌ ಎಸ್‌ ಎಸ್‌ನ ಕೈಗೊಂಬೆಯಾಗಿದ್ದಾರೆ ಎಂದು ಕಿಡಿಕಾರಿದರು. ಅವರ ತಾಯಿ ಎಷ್ಟೋ ವರ್ಷಗಳ ಹಿಂದೆ ಮತಾಂತರ ಆಗಿದ್ದರು. ಆಗ್ಯಾಕೆ ಗೂಳಿಹಟ್ಟಿ ಮಾತನಾಡಿಲ್ಲ, ಈಗ ಯಾಕೆ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಧರ್ಮ , ಪೂಜೆ ವಿಚಾರಗಳೆಲ್ಲ ಮನೆಯಲ್ಲಿರಬೇಕು, ಅದನ್ನೇಲ್ಲ ಬೀದಿಗೆ ತರಬಾರದು ಎಂದು ಗೂಳಿಹಟ್ಟಿ ವಿರುದ್ಧ ಕಿಡಿಕಾರಿದರು.

Share Post