Politics

ಪ್ರಮಾಣವಚನ ಸ್ವೀಕರಿಸಿದ ಮಾರನೇ ದಿನವೇ ಬೇಡವಾಯ್ತಂತೆ ಇವರಿಗೆ ಸಚಿವ ಸ್ಥಾನ!!

ಕೇರಳ; ಈ ಬಾರಿ ಕೇರಳದಿಂದ ಬಿಜೆಪಿಯ ಒಬ್ಬರು ಸಂಸದರು ಆಯ್ಕೆಯಾಗಿದ್ದಾರೆ.. ಅವರೇ ಸುರೇಶ್ ಗೋಪಿ.. ತ್ರಿಶೂರ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸುರೇಶ್‌ ಗೋಪಿಗೆ ಸಚಿವ ಸ್ಥಾನ ನೀಡಲಾಗಿದ್ದು, ನಿನ್ನೆಯಷ್ಟೇ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದರು.. ಆದ್ರೆ ಇದೀಗ ಸಚಿವ ಸ್ಥಾನ ನನಗೆ ಬೇಡವಾಗಿತ್ತು.. ಆದಷ್ಟು ಬೇಗ ಈ ಸ್ಥಾನದಿಂದ ಮುಕ್ತನಾಗುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿಕೊಂಡಿದ್ದಾರೆ..

ಇದೇ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದೆ.. ಈ ಹಿನ್ನೆಲೆಯಲ್ಲಿ ಸುರೇಶ್‌ ಗೋಪಿಯವರಿಗೆ ಸಚಿವ ಸ್ಥಾನ ನೀಡಲಾಗಿದೆ.. ಆದ್ರೆ ಈ ಹಿಂದೆ ರಾಜ್ಯಸಭಾ ಸದಸ್ಯರೂ ಆಗಿದ್ದ ಸುರೇಶ್‌ ಗೋಪಿ, ಕೇರಳದಲ್ಲಿ ಸಿನಿಮಾ ನಟರೂ ಹೌದು.. ಅವರು ಈಗಾಗಲೇ ಹಲವು ಚಿತ್ರಗಳಿಗೆ ಸಹಿ ಹಾಕಿದ್ದಾರಂತೆ.. ಅವುಗಳನ್ನು ಮುಗಿಸಿಕೊಡುವ ಜವಾಬ್ದಾರಿ ನನ್ನ ಮೇಲಿದೆ.. ಹೀಗಾಗಿ ಸಚಿವ ಸ್ಥಾನದಲ್ಲಿದ್ದರೆ ಆ ಹುದ್ದೆಗೆ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ..

ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ.. ಸಚಿವ ಸ್ಥಾನ ಕೊಟ್ಟಾಗ ಸದ್ಯಕ್ಕೆ ಅದು ನನಗೆ ಅಗತ್ಯವಿಲ್ಲ ಎಂದೇ ಹೇಳಿದ್ದೆ.. ಸಂಸದನಾಗಿ ನಾನು ನನ್ನ ಕಾರ್ಯ ಮಾಡುತ್ತೇನೆ.. ಜೊತೆ ಚಿತ್ರರಂಗದಲ್ಲಿ ಬಾಕಿ ಉಳಿದ ಕೆಲಸಗಳನ್ನು ಮಾಡುತ್ತೇನೆ ಎಂದೂ ಸುರೇಶ್‌ ಗೋಪಿ ಹೇಳಿದ್ದಾರೆ.. ಈ ಮೂಲಕ ಅವರು ಆದಷ್ಟು ಬೇಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನ್ನಾಗಿದ್ದಾರೆ..

 

Share Post