DistrictsPolitics

ಪ್ರಜ್ವಲ್‌ಗೆ ಏನೂ ಗೊತ್ತಾಗಲ್ಲ, ಒಳ್ಳೆಯ ಹುಡುಗ; ರೇವಣ್ಣ

ಹಾಸನ; ಪಾಪ ಪ್ರಜ್ವಲ್‌ಗೂ ಏನೂ ಗೊತ್ತಾಗೋದಿಲ್ಲ.. ಅವನು ಒಳ್ಳೆಯ ಹುಡುಗ ಎಂದು ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ.. ಹಾಸನದಲ್ಲಿ ಮಾತನಾಡಿರುವ ಅವರು, ನಮ್ಮ ವಿರುದ್ಧ ಕೆಲಸ ಮಾಡಿದವರೆಲ್ಲಾ ಕೈಗೆ ಸಿಗದೇ ಎಲ್ಲಿಗೆ ಹೋಗುತ್ತಾರೆ.. ಮೂರು ವರ್ಷ ಸುಮ್ಮನಿರಿ.. ಬಡ್ಡಿ ಸಮೇತ ತೀರಿಸದಿದ್ದರೆ ನಾನು ಗೌಡರ ಮಗನೇ ಅಲ್ಲ ಎಂದು ತಿರುಗೇಟು ನೀಡಿದ್ದಾರೆ..
ಹಾನಸದ ಆಲೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ ಅವರು, ನನಗೆ ಕೊಟ್ಟಿದ್ದನ್ನು ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ.. ಮೂರು ವರ್ಷ ಕಾಯಿರಿ.. ಮತ್ತೆ ನೋಡ್ತೀನಿ ಎಂದಿದ್ದಾರೆ.. ಹಾಸನದಲ್ಲಿ ಹೆಚ್.ಎಸ್. ಪ್ರಕಾಶ್‌ ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದರು. 2013ರಲ್ಲಿ ಪ್ರಕಾಶ್‌ಗೆ ಸೀಟ್ ಕೊಡಿಸಿಕೊಂಡು ಬಂದೆ, ಅಲ್ಪಸಂಖ್ಯಾತರಿಂದಾಗಿ ಅವರು ಸೋತರು ಎಂದು ರೇವಣ್ಣ ಹೇಳಿದ್ದಾರೆ..
ಇನ್ನು ಹಾಸನದಲ್ಲಿ 50 ಸಾವಿರಕ್ಕಿಂತ ಒಂದು ಕಡಿಮೆ ಮಾರ್ಜಿನ್‌ ಬಂದರೂ ರಾಜೀನಾಮೆ ಕೊಡುತ್ತೇನೆ ಎಂದು ಜಾಲೆಂಜ್‌ ಹಾಕಿದ್ದರು.. ಹೀಗಾಗಿ ನನ್ನ ಪರವಾಗಿ ಸ್ವರೂಪ್‌ ಅವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬಂದೆವು.. ಹಾಸನದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರಿಂದ ಸಕಲೇಶಪುರದಲ್ಲಿ ಸೋಲಬೇಕಾಯಿತು ಎಂದು ರೇವಣ್ಣ ಇದೇ ವೇಳೆ ಹೇಳಿದ್ದಾರೆ..

Share Post