NationalPolitics

ಮಹಾ ರಾಜಕೀಯ; ಶಕ್ತಿ ಪ್ರದರ್ಶಿಸಿದ ಏಕನಾಥ್‌ ಶಿಂಧೆ-ಕಿಡ್ನ್ಯಾಪ್‌ ಎಂದ ಸಂಜಯ್‌ ರಾವುತ್

ಮುಂಬೈ; ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕೊನೆ ಹಂತಕ್ಕೆ ಬಂದು ತಲುಪಿದೆ.  ಉದ್ಧವ್‌ ಠಾಕ್ರೆ ಸರ್ಕಾರ ಬೀಳುವುದು ಬಹತೇಕ ಖಚಿತವಾಗಿದೆ. ಇತ್ತು ಗುವಾಹಟಿಯ ಖಾಸಗಿ ಹೋಟೆಲ್‌ನಲ್ಲಿ ರೆಬೆಲ್‌ ಶಾಸಕರು ತಂಗಿದ್ದು, ರೆಬೆಲ್‌ ಶಾಸಕರ ನಾಯಕ ಏಕನಾಥ್‌ ಶಿಂಧೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ತನ್ನ ಜೊತೆ 42 ಶಾಸಕರಿದ್ದಾರೆ ಎಂದು ಹೇಳಲು, ಎಲ್ಲಾ ಶಾಸಕರೂ ಇದ್ದ ವಿಡಿಯೋ ಒಂದನ್ನು ರಿಲೀಸ್‌ ಮಾಡಿದ್ದಾರೆ.

 

ವಿಡಿಯೋ ರಿಲೀಸ್‌ ಮಾಡುತ್ತಿದ್ದಂತೆ ಉದ್ಧವ್‌ ಠಾಕ್ರೆ ಪರ ಇರುವ ಸಂಜಯ್‌ ರಾವುತ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. ಶಾಸಕರನ್ನು ಕಿಡ್ನ್ಯಾಪ್‌ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಶಿಂಧೆಯಿಂದ ತಪ್ಪಿಸಿಕೊಂಡು ಬಂದಿರುವ ಇಬ್ಬರು ರೆಬೆಲ್‌ ಶಾಸಕರ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ನಮಗೆ 21 ಶಾಸಕರು ಸಂಪರ್ಕದಲ್ಲಿದ್ದಾರೆ. ಅವರನ್ನು ಬಲವಂತದಿಂದ ಕರೆದುಕೊಂಡು ಹೋಗಿ ಹೋಟೆಲ್‌ನಲ್ಲಿಟ್ಟಿದ್ದಾರೆ ಎಂದು ಸಂಜಯ್‌ ರಾವುತ್‌ ಆರೋಪಿಸಿದ್ದಾರೆ.

 

Share Post