Politics

ಪರಿಕ್ಕರ್‌ ಪುತ್ರನಿಗೆ ಬಿಜೆಪಿ ಟಿಕೆಟ್‌ ನಿರಾಕರಣೆ; ಕೇಜ್ರಿವಾಲ್‌ ಎಎಪಿಗೆ ಆಹ್ವಾನ

ಪಣಜಿ; ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರ ಪುತ್ರ ಉತ್ಪಾಲ್‌ ಪರಿಕ್ಕರ್‌ ಬಿಜೆಪಿಯಿಂದ ಟಿಕೆಟ್‌ ಬಯಸಿದ್ದರು. ಪಂಜಿಮ್‌ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದ್ರೆ ಇಂದು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ್ದು, ಅದ್ರಲ್ಲಿ ಉತ್ಪಾಲ್‌ ಪರಿಕ್ಕರ್‌ ಗೆ ಟಿಕೆಟ್‌ ಸಿಕ್ಕಿಲ್ಲ. ಹೀಗಾಗಿ ಉತ್ಪಾಲ್‌ ಪರಿಕ್ಕರ್‌ ಅವರು ಎಎಪಿಗೆ ಬಂದರೆ ಮುಕ್ತ ಆಹ್ವಾನವಿದೆ. ಅವರು ಕೇಳಿದ ಕ್ಷೇತ್ರದಲ್ಲಿ ಟಿಕೆಟ್‌ ನೀಡುತ್ತೇವೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಆಹ್ವಾನ ನೀಡಿದ್ದಾರೆ.

ಬಿಜೆಪಿ ಬಳಸಿ ಬಿಸಾಕುವಂತಹ ಪಕ್ಷ. ಮನೋಹರ್‌ ಪರಿಕ್ಕರ್‌ ಕುಟುಂಬವನ್ನು ಬಿಜೆಪಿ ಹೀನಾಯವಾಗಿ ಕಾಣುತ್ತಿದೆ. ಗೋವಾದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯಲು ಕಾರಣರಾದ ಪರಿಕ್ಕರ್‌ ಕುಟುಂಬವನ್ನೇ ಮೂಲೆಗುಂಪು ಮಾಡಲಾಗಿದೆ. ಹೀಗಾಗಿ ಪರಿಕ್ಕರ್‌ ಪುತ್ರ ಉತ್ಪಾಲ್‌ ಪರಿಕ್ಕರ್‌ ಅವರು ಎಎಪಿ ಬಂದ್ರೆ ಅವರಿಗೆ ಉನ್ನತ ಸ್ಥಾನಮಾನ ನೀಡುತ್ತೇವೆ. ಬಯಸಿದ ಕ್ಷೇತ್ರದಿಂದಲೇ ಟಿಕೆಟ್‌ ನೀಡುತ್ತೇವೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

Share Post