Politics

ಜೆಡಿಎಸ್‌ನವರು ಕರೆಯಲಿಲ್ಲ, ಅದಕ್ಕೆ ಪ್ರಚಾರ ಮಾಡಲಿಲ್ಲ; ಸುಮಲತಾ

ಮಂಡ್ಯ; ನಾನು ನಮ್ಮ ಪಕ್ಷದ ನಾಯಕರು ಎಲ್ಲಿ ಹೇಳಿದ್ದಾರೋ ಅಲ್ಲೆಲ್ಲಾ ಹೋಗಿ ಪ್ರಚಾರ ಮಾಡಿದ್ದೇನೆ.. ಮಂಡ್ಯದಲ್ಲಿ ಪ್ರಚಾರ ಮಾಡಲು ಜೆಡಿಎಸ್‌ ನಾಯಕರು ನನ್ನನ್ನು ಕರೆಯಲಿಲ್ಲ.. ಸಭೆಗಳ ಬಗ್ಗೆ ಮಾಹಿತಿ ನೀಡಲಿಲ್ಲ.. ಅವರು ಕರೆಯದೇ ನಾನು ಹೇಗೆ ಪ್ರಚಾರ ಹೋಗಲು ಸಾಧ್ಯ ಎಂದು ಸಂಸದೆ ಸುಮಲತಾ ಪ್ರಶ್ನೆ ಮಾಡಿದ್ದಾರೆ..

ಸಂಸದೆ ಸುಮಲತಾ ಅವರು ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.. ಅನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದೇವೇಗೌಡರು ಸುಮಲತಾ ಅವರು ನಮಗೆ ಸಪೋರ್ಟ್‌ ಮಾಡಲಿಲ್ಲ ಎಂದು ಹೇಳಿದ್ದಾರೆ.. ಆದ್ರೆ ಅವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಹಾಗೆ ಹೇಳಿದ್ದಾರೆ ಎಂದರು.

 

Share Post