Politics

ಆಂಧ್ರ ಸಿಎಂ ಜಗನ್ ರೆಡ್ಡಿ ಮೇಲೆ ಕಲ್ಲಿನ ದಾಳಿ

ವಿಜಯವಾಡ; ಚುನಾವಣೆ ಪ್ರಚಾರದ ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲಿನ ದಾಳಿ ನಡೆಸಲಾಗಿದೆ. ಈ ವೇಳೆ ಜಗನ್ ಹಣೆಗೆ ಗಾಯವಾಗಿದೆ.

 ಆಂಧ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಎರಡಕ್ಕೂ ಒಂದೇ ಬಾರಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಜಗನ್ ಬಸ್ ಯಾತ್ರೆ ಮಾಡುತ್ತಿದ್ದಾರೆ. ಇಂದು ಅವರು ವಿಜಯವಾಡದಲ್ಲಿ ಪ್ರಚಾರ ಮಾಡುವಾಗ ಕಲ್ಲಿನ ದಾಳಿ ಮಾಡಲಾಗಿದೆ.

 ವ್ಯಕ್ತಿಯೊಬ್ಬ ಸಿಎಂ ಜಗನ್ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಈ ಘಟನೆಯಲ್ಲಿ ಜಗನ್ ಎಡಗಣ್ಣಿನ ಹುಬ್ಬಿನ ಮೇಲೆ ಗಾಯವಾಗಿದೆ. ಪಕ್ಕದಲ್ಲಿದ್ದ ವೈಸಿಪಿ ಶಾಸಕ ವೆಲ್ಲಂಪಳ್ಳಿ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Share Post