National

ಮಗುವಿಗೆ ಹಾಲು ಕುಡಿಸುತ್ತಲೇ ಪ್ರಾಣ ಬಿಟ್ಟ ತಾಯಿ

ನಾಗರಕರ್ನೂಲ್; ತೆಲಂಗಾಣದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ತಾಯಿ ತಮ್ಮ ಮುಗುವಿಗೆ ಹಾಲು ಕುಡಿಸುತ್ತಿರುವಾಗಲೇ ಆಕೆಗೆ ಹೃದಯಾಘಾತವಾಗಿದೆ. ಸ್ಥಳದಲ್ಲೇ ತಾಯಿ ಮೃತಪಟ್ಟಿದ್ದು, ಪುಟ್ಟ ಮಗು ತಾಯಿಯಿಲ್ಲದೆ ಅನಾಥವಾಗಿದೆ.

 

ನಾಗರಕರ್ನೂಲ್ ಜಿಲ್ಲೆಯ ತಿಮ್ಮರಾಜ ಮಂಡಲ್ ನ ನೆರೆಲ್ಲಪಲ್ಲಿ ಗ್ರಾಮದಲ್ಲಿ ಈ ದರ್ಘಟನೆ ನಡೆದಿದೆ. ರಾಜಾಪುರ ಮಂಡಲದ ತಿರುಮಲಾಪುರ ಗ್ರಾಮದ ಜಯಶ್ರೀ (25) ಎಂಬುವವರು ಎರಡು ತಿಂಗಳ ಹೆಣ್ಣುಮಗುವಿದೆ. ಇತ್ತೀಚೆಗೆ ಜಯಶ್ರೀ ಅನಾರೋಗ್ಯಕ್ಕೀಡಾಗಿದ್ದರು. ಪತಿ ಪ್ರಶಾಂತ್, ಜಯಶ್ರೀ ಅವರನ್ನು ಮಹಬೂಬ್​ ನಗರದ ಆಸ್ಪತ್ರೆಯೊಂದರಲ್ಲಿ ಸೇರಿಸಿದ್ದರು. ಅವರ ಹೃದಯನಾಳದಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಔಷಧದಿಂದ ಗುಣವಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು.

   ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಜಯಶ್ರೀ ಮಗುವಿಗೆ ಹಾಲು ಕುಡಿಸುತ್ತಲೇ ಹೃದಯಾಘಾತ ಕಾಣಿಸಿಕೊಂಡು ನಿಧನರಾಗಿದ್ದಾರೆ. ಅಜ್ಜ, ಅಜ್ಜಿ ಆಕೆಯನ್ನು ಟೀ ಕುಡಿಯಲು ಕೂಗಿದರೂ ಎದ್ದು ಬರದಿದ್ದಾಗ, ಹೋಗಿ ನೋಡಿದರೆ ಅವರಿಗೆ ಆಘಾತ ಕಾದಿತ್ತು. ಹಾಲು ಕುಡಿಸುತ್ತಲೇ ಜಯಶ್ರೀ ನಿಧನರಾಗಿದ್ದರು.

Share Post