NationalPolitics

ಸುದೀಪ್‌ ಬಿಜೆಪಿ ಬೆಂಬಲಕ್ಕೆ ನಮ್ಮ ಅಭ್ಯಂತರವಿಲ್ಲ; ಡಿ.ಕೆ.ಶಿವಕುಮಾರ್‌

ನವದೆಹಲಿ; ನಟ ಸುದೀಪ್‌ ಅವರು ಬಿಜೆಪಿಯನ್ನು ಬೆಂಬಲಿಸುತ್ತಿರುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಲಾವಿದರು ಅವರಿಗೆ ಬೇಕಾದವರನ್ನು ಬೆಂಬಲಿಸುತ್ತಾರೆ. ಅದೇ ರೀತಿ ಸುದೀಪ್‌ ಬೆಂಬಲಿಸುತ್ತಿದ್ದಾರೆ. ಅದಕ್ಕೆ ನನ್ನ ಆಕ್ಷೇಪ ಇಲ್ಲ ಎಂದು ಹೇಳಿದರು.

ಸರ್ಕಾರ ಸಿನಿಮಾ ನಟರ ಮೇಲೆ ಒತ್ತಡ ಹಾಕಿರಬಹುದು. ಇಲ್ಲದೇ ಹೋಧರೆ ನಟರ ಬಳಿ ಮನವಿ ಮಾಡಿಕೊಂಡಿರಬಹುದು. ನಾನು ಕೂಡಾ ಸುದೀಪ್‌ ಅವರನ್ನು ಭೇಟಿಯಾಗಿದ್ದೆ. ಆದ್ರೆ ಅದು ರಾಜಕೀಯ ಉದ್ದೇಶದಿಂದ ಆದ ಭೇಟಿಯಾಗಿರಲಿಲ್ಲ. ನಾನು ಹಾಗೂ ಸುದೀಪ್‌ ಕಳೆದ ಸ್ನೇಹಿತರು. ನಮ್ಮ ನಡುವೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಶಿವಕುಮಾರ್‌ ಹೇಳಿದ್ದಾರೆ.

Share Post