HealthNational

ಮಳೆಗೆ ಗೋಡೆ ಕುಸಿತ; ಮಗು ಸೇರಿ 7 ಮಂದಿ ದುರ್ಮರಣ!

ಹೈದರಾಬಾದ್‌; ತೆಲಂಗಾಣದಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದೆ.. ಇದರಿಂದಾಗಿ ಬಚುಪಳ್ಳಿ ಎಂಬಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದುಬಿದ್ದು ದುರಂತ ನಡೆದಿದೆ.. ಘಟನೆಯಲ್ಲಿ ನಾಲ್ಕು ವರ್ಷದ ಮಗು ಸೇರಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ..

ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿತ್ತು.. ಛತ್ತಿಸ್‌ಗಢ ಹಾಗೂ ಒಡಿಶಾದಿಂದ ಕಾರ್ಮಿಕರು ಕಟ್ಟಡ ಕೆಲಸಕ್ಕೆ ಬಂದಿದ್ದರು.. ಅವರು ನಿರ್ಮಾಣ ಹಂತದ ಕಟ್ಟಡದಲ್ಲೇ ಉಳಿದುಕೊಂಡಿದ್ದರು.. ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ಈ ವೇಳೆ ನಿರ್ಮಾಣ ಹಂತದ ಗೋಡೆ ಕಾರ್ಮಿಕರ ಮೇಲೆ ಕುಸಿದುಬಿದ್ದು ದುರಂತ ನಡೆದಿದೆ..

ತೆಲಂಗಾಣ ಹಲವು ಭಾಗಗಳಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ.  ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಹಲವು ಕಡೆ ಸಾಕಷ್ಟು ತೊಂದರೆಗಳಾಗಿವೆ.

 

Share Post