NationalPolitics

ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ; ಜಮೀನಿನಲ್ಲಿ ಲ್ಯಾಂಡಾದ ಕೆಸಿಆರ್‌ ಇದ್ದ ಕಾಪ್ಟರ್‌

ಹೈದರಾಬಾದ್‌; ತೆಲಂಗಾಣದಲ್ಲಿ ಚುನಾವಣಾ ಕಣ ರಂಗೇರಿದೆ. ಪ್ರಚಾರದ ಭರಾಟೆ ಜೋರಾಗಿದೆ. ಹಾಲಿ ಸಿಎಂ ಕೆಸಿಆರ್‌ ಬಿಡುವಿಲ್ಲದೆ ರಾಜ್ಯಾದ್ಯಂತ ಸುತ್ತಾಟ ನಡೆಸುತ್ತಿದ್ದಾರೆ. ಇಂದು ಅವರು ದೇವಕದ್ರದಲ್ಲಿ ನಡೆಯುವ ಪ್ರಚಾರ ಸಭೆಗೆ ಹಾಜರಾಗಬೇಕಿತ್ತು. ಹೀಗಾಗಿ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದ ಪೈಲಟ್‌ ಸಮಯಪ್ರಜ್ಞೆ ಮೆರೆದಿದ್ದಾರೆ. ಕೂಡಲೇ ಅವರು ಸಮತಟ್ಟಾದ ಹೊಲಗಳು ಇರುವ ಕಡೆಗೆ ಹೆಲಿಕಾಪ್ಟರ್‌ ತಿರುಗಿಸಿದ್ದಾರೆ. ಸೇಫಾಗಿ ಜಮೀನಿನಲ್ಲಿ ಲ್ಯಾಂಡ್‌ ಮಾಡಿದ್ದಾರೆ. ಅನಂತರ ಸಿಎಂ ಕೆಸಿಆರ್‌ ಅವರು ಮತ್ತೊಂದು ಹೆಲಿಕಾಪ್ಟರ್‌ ತರಿಸಿಕೊಂಡು ತೆರಳಿದ್ದಾರೆ.

 

Share Post