National

ಗಣರಾಜ್ಯೋತ್ಸವ ಪರೇಡ್ ಗೆ ರಾಜ್ಯದ ಟ್ಯಾಬ್ಲೊ ತಿರಸ್ಕಾರ

ಬೆಂಗಳೂರು; ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಗೆ ಕರ್ನಾಟಕದ ಟ್ಯಾಬ್ಲೋ ವನ್ನು ತಿರಸ್ಕಾರ ಮಾಡಲಾಗಿದೆ. ರಾಜ್ಯ ವಾರ್ತಾ ಮತ್ತು ಸಂಪರ್ಕ ಇಲಾಖೆ ನಾಲ್ಕು ವಿಷಯದ ಪರಿಕಲ್ಪನೆ ಸಲ್ಲಿಸಿತ್ತು. ಆದ್ರೆ ನಾಲ್ಕನ್ನೂ ಕೇಂದ್ರ ತಿರಸ್ಕಾರ ಮಾಡಿದೆ.

ಬ್ರಾಂಡ್ ಬೆಂಗಳೂರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ಮತ್ತು ಬೆಂಗಳೂರು ಅಣ್ಣಮ್ಮ ದೇವಿ ದೇವಸ್ಥಾನದ ಥೀಮ್ ಕಲ್ಪನೆಗಳನ್ನು ಆಯ್ಕೆ ಸಮಿತಿಗೆ ಕಳುಹಿಸಿತ್ತು. ಆದ್ರೆ ಎಲ್ಲವೂ ತಿರಸ್ಕೃತವಾಗಿವೆ.

 

Share Post