National

ವಾರಣಾಸಿಯ ಕಾರ್ಯಕರ್ತರೊಂದಿಗೆ ನಾಳೆ ಮೋದಿ ವರ್ಚ್ಯುವಲ್‌ ಮೀಟ್

ನವದೆಹಲಿ : ಇತ್ತೀಚೆಗಷ್ಟೇ ಪಂಚ ರಾಜ್ಯಗಳ ಚುನಾವಣೆ ಘೋಷಣೆ ಆಗಿದೆ. ಚುನಾವಣೆ ಘೋಷಣೆಯ ಬಳಿಕ ಮೋದಿ ತಮ್ಮ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಕಾರ್ಯಕರ್ತರೊಟ್ಟಿಗೆ ವರ್ಚ್ಯುವಲ್‌ ಸಂವಾದ ನಡೆಸಲಿದ್ದಾರೆ.

ನಾಳೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ನಮೋ ಆಪ್‌ ಮೂಲಕ ಪ್ರಧಾನಿ ಕಾಶಿ ಮತ್ತು ವಾರಣಾಸಿಯ ಕಾರ್ಯಕರ್ತರ ಜೊತೆ ವೀಡಿಯೋ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಕಾಶಿ ಘಟಕದ ಅಧ್ಯಕ್ಷ ಮಹೇಶ್‌ ಚಂದ್ರ ಶ್ರೀವಾಸ್ತವ ತಿಳಿಸಿದ್ದಾರೆ.

ಚುನಾವಣೆ ಕುರಿತು ನಡೆಯುವ ಈ ಸಂವಾದದಲ್ಲಿ, ಪಕ್ಷದ ಕಾರ್ಯಕರ್ತರು ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು ಮೋದಿ ಅವರೊಟ್ಟಿಗೆ ಹಂಚಿಕೊಳ್ಳಬಹುದಾಗಿದೆ.

ಕೋವಿಡ್‌ ಕಾರಣದಿಂದ ಈ ವರ್ಚ್ಯೂವಲ್‌ ಸಂವಾದ ನಡೆಸಲಾಗ್ತಿದೆ ಎಂದು ಮಹೇಶ್‌ ಚಂದ್ರ ಹೇಳಿದ್ದಾರೆ.

Share Post