National

ಮುಂದಿನ 25 ವರ್ಷಗಳು ಅಮೃತ ಕಾಲ: ನಿರ್ಮಲಾ ಸೀತಾರಾಮನ್‌

ನವದೆಹಲಿ: ದೇಶಕ್ಕೆ ಮುಂದಿನ 25 ವರ್ಷಗಳು ಅತಿ ಮುಖ್ಯವಾದುವು. ಈ ಸಮಯವನ್ನು ಅಮೃತ ಕಾಲ ಎಂದರೆ ಯಾವುದೇ ಅತಿಶಯೋಕ್ತಿಯಾಗಲಾರದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಸದನಲ್ಲಿ ಮಾತನಾಡಿದ ಅವರು, ನಾವು ಭಾರತ ಸ್ವಾತಂತ್ರ್ಯದ ನೂರನೇ ವರ್ಷಕ್ಕೆ ಒಂದು ಗುರಿ ಇಟ್ಟುಕೊಳ್ಳಲೇಬೇಕಾಗುತ್ತದೆ. ಇಲ್ಲದೇ ಹೋದರೆ ಕಳೆದ ಎಪ್ಪತ್ತು ವರ್ಷಗಳಲ್ಲಿ ಅನುಭವಿಸಿ ಸಂಕಷ್ಟಗಳನ್ನೇ ನಾವು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ದೇಶವನ್ನು 65 ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ವಿಷನ್‌ ಇರಲಿಲ್ಲ. ಅವರ ವಿಷನ್‌ ಏನಿದ್ದರೂ ಒಂದು ಕುಟುಂಬವನ್ನು ಬೆಂಬಲಿಸುವುದು, ಒಂದು ಕುಟುಂಬವನ್ನು ಅಭಿವೃದ್ಧಿಪಡಿಸುವುದು ಹಾಗೂ ಒಂದು ಕುಟುಂಬಕ್ಕೆ ಲಾಭ ತಂದುಕೊಡುವುದೇ ಆಗಿತ್ತು. ಆದ್ರೆ ಈಗ ದೇಶದ ಉದ್ಧಾರವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಅದಕ್ಕಾಗಿ 25 ವರ್ಷಗಳ ವಿಷನ್‌ ಇಟ್ಟುಕೊಳ್ಳಬೇಕಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

Share Post