National

ಹೊಸ ಸಂಸತ್‌ ಭವನದಲ್ಲಿ ಶ್ರಮಿಕರಿಗಾಗಿ ವಿಶೇಷ ಗ್ಯಾಲರಿ; ಮೋದಿ

ನವದೆಹಲಿ; ನಿನ್ನೆ ‘ಕರ್ತವ್ಯ ಪಥ’ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ದೇಶದಲ್ಲಿ ಶ್ರಮಿಕನಿಗೆ ಗೌರವ ಸಲ್ಲಿಸಲು ಹೊಸ ಸಂಸತ್ ಭವನ ಕಟ್ಟಡದ ನಿರ್ಮಾಣಕ್ಕಾಗಿ ದುಡಿದ ಕಾರ್ಮಿಕರಿಗಾಗಿ ವಿಶೇಷ ಗ್ಯಾಲರಿ ಮಾಡಲಾಗುವುದು ಮೋದಿ ಇದೇ ವೇಳೆ ಹೇಳಿದ್ದಾರೆ.

ಕರ್ತವ್ಯ ಪಥ ಕಾಮಗಾರಿಯಲ್ಲಿ ಭಾಗವಹಿಸಿದ 16 ಕಾರ್ಮಿಕರ ಗುಂಪನ್ನು ಭೇಟಿ ಮಾಡಿದ ಪ್ರಧಾನಿ, 2023ರ ಗಣರಾಜ್ಯೋತ್ಸವದ ಪರೇಡ್​ ಕಾರ್ಯಕ್ರಮಕ್ಕೆ ಕಾರ್ಮಿಕರ ಕುಟುಂಬವನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಕೃತಜ್ಞತೆ ವ್ಯಕ್ತಪಡಿಸಿದ ಮೋದಿ, ಕರ್ತವ್ಯ ಪಥ ಪುನರಾಭಿವೃದ್ಧಿಗೆ ಶ್ರಮ ಮತ್ತು ಉಸಿರಿನ ಧಾರೆಯೆರೆದು ಕೆಲಸ ಮಾಡಿದ್ದೀರಿ ಎಂದು ಶ್ಲಾಘಿಸಿದರು.

Share Post