National

ಕಾರಿನ ಮೇಲೆ ಪ್ರಧಾನಿ ಬಗ್ಗೆ ಆಕ್ಷೇಪಾರ್ಹ ಬರಹ; ಕೇರಳದಲ್ಲಿ ವಾಹನ ವಶ

ತಿರುವನಂತಪುರಂ: ಉತ್ತರ ಪ್ರದೇಶದ ನೋಂದಣಿ ಹೊಂದಿರುವ ಕಾರಿನ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಆಕ್ಷೇಪಾರ್ಹ ಬರಹ ಬರೆದು ಓಡಾಡುತ್ತಿದ್ದ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.  ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೊಲೆಗಾರರು ಎಂದು ಕಾರಿನ ಮೇಲೆ ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ. ಜೊತೆಗೆ ಆರ್‌ಎಸ್‌ಎಸ್‌ ಒಂದು ಭಯೋತ್ಪಾದಕ ಸಂಘಟನೆ ಎಂದು ಬರೆಯಲಾಗಿದೆ.

   ಕಾರಿನ ಸುತ್ತಲೂ ಮೋದಿ ಹಾಗೂ ಯೋಗಿ ಆದಿತ್ಯನಾಥ್‌ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿದೆ. ಈ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ತಿರುವನಂತಪುರದ ಹೋಟೆಲ್‌ ಒಂದಕ್ಕೆ ಬಂದಿದ್ದ. ಈ ವೇಳೆ ಕಾರಿನ ಬರೆದಿದ್ದ ಬರಹ ನೋಡಿ ಸ್ಥಳಿಯರು ಆತನನ್ನು ಪ್ರಶ್ನಿಸಿದಾರೆ. ಈ ವೇಳೆ ಆ ವ್ಯಕ್ತಿ, ಕಾರನ್ನು ಅಲ್ಲೇ ಬಿಟ್ಟು ಆಟೋ ಒಂದರಲ್ಲಿ ಪರಾರಿಯಾಗಿದ್ದಾನೆ.

ಕೂಡಲೇ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆತ ಏನಕ್ಕೆ ಆ ಬರಹ ಬರೆದ, ಆತ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.

Share Post