National

ಬಿಜೆಪಿ ಮೈತ್ರಿಕೂಟ ಕಟ್ಟಲು ಕೆಸಿಆರ್‌ ಪ್ರಯತ್ನ- ಕುತೂಹಲ ಕೆರಳಿಸಿದ ʻಮಹಾʼ ಸಿಎಂ ಭೇಟಿ

ಮಹಾರಾಷ್ಟ್ರ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಹ್ವಾನದ ಮೇರೆಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಮುಂಬೈಗೆ ತೆರಳಲಿದ್ದಾರೆ. ಫೆಬ್ರವರಿ 20 ರಂದು ಉದ್ಧವ್‌ ಠಾಕ್ರೆ ಹಾಗೂ ಕೆಸಿಆರ್‌ ಭೇಟಿ ನಿಗದಿಯಾಗಿದೆ. ನಿನ್ನೆ ದೂರವಾಣಿ ಮೂಲಕ ಕೆಸಿಆರ್‌ ಹಾಗೂ ಠಾಕ್ರೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮುಂಬೈಗೆ ಬರುವಂತೆ ಆಹ್ವಾನ ನೀಡಲಾಗಿದೆ. ಆಹ್ವಾನ ಹಿನ್ನೆಲೆ ಫೆ.20ರಂದು ಮುಂಬೈಗೆ ತೆರಳಲಿದ್ದಾರೆ ಕೆಸಿಆರ್.‌

ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆ ಮಾಡಲು ಕೆಸಿಆರ್‌ ಸತತ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ನಿನ್ನೆ ಕೆಸಿಆರ್‌ಗೆ ಬೆಂಬಲ ವ್ಯಕ್ತಪಡಿಸಿ ಮಾತುಕತೆ ನಡೆಸಿದ್ದಾರೆ. ಹೆಚ್‌.ಡಿ.ದೇವೇಗೌಡ ಹಾಗೂ ಉದ್ಧವ್‌ ಠಾಕ್ರೆ ಮಾತುಕತೆ ನಡೆಸಿದ್ದಾರೆ.

Share Post