HealthNational

ಕೆಸಿಆರ್‌ ಸೊಂಟದ ಮೂಳೆ ಮುರಿದಿದೆ; ಯಶೋದಾ ಆಸ್ಪತ್ರೆ ಹೆಲ್ತ್‌ ಬುಲೆಟಿನ್‌

ಹೈದರಾಬಾದ್‌; ತೆಲಂಗಾಣ ಸರ್ಕಾರದ ಮಾಜಿ ಸಿಎಂ ಕೆಸಿಆರ್‌ ಅವರು ಕಳೆದ ರಾತ್ರಿ ಅವರ ಮನೆಯ ಬಾತ್‌ ರೂಮ್‌ನಲ್ಲಿ ಕಾಲು ಜಾರಿ ಬಿದ್ದು ಸೊಂಟದ ಮುರಿದುಕೊಂಡಿದ್ದಾರೆ. ಅವರನ್ನು ರಾತ್ರಿಯೇ ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಪಕ್ಷದ ಬೆಂಬಲಿಗರು ಹಾಗೂ ಕುಟುಂಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಯಶೋದಾ ಆಸ್ಪತ್ರೆ ಕೆಸಿಆರ್‌ ಅವರ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದೆ.

ಕೆಸಿಆರ್‌ ಅವರಿಗೆ ಸಿಟಿ ಸ್ಕ್ಯಾನ್‌ ಮಾಡಿ ಪರೀಕ್ಷೆ ಮಾಡಲಾಗಿದೆ. ಅವರ ಸೊಂಟದ ಮೂಳೆ ಮುರಿತವಾಗಿದೆ. ಬಾತ್‌ರೂಮ್‌ನಲ್ಲಿ ಜಾರಿಬಿದ್ದಿದ್ದರಿಂದ ಈ ಮೂಳೆ ಮುರಿತ ಆಗಿದೆ. ಹೀಗಾಗಿ ಸೊಂಟದ ಎಡಭಾಗದ ಪಕ್ಕೆಲುಬು ಬದಲಾಯಿಸಬೇಕಾಗುತ್ತದೆ. ಹೀಗಾಗಿ, ಚಂದ್ರಶೇಖರ್‌ ರಾವ್‌ ಅವರ ಚೇತರಿಕೆಗೆ ಆರರಿಂದ ಎಂಟು ವಾರಗಳು ಬೇಕಾಗಬಹುದು ಎಂದು ಆಸ್ಪತ್ರೆ ಹೇಳಿದೆ.

ಕೆಸಿಆರ್‌ ಅವರು ಆರೋಗ್ಯ ಸ್ಥಿರವಾಗಿದ್ದು, ತಜ್ಞ ವೈದ್ಯರು ಅವರ ಮೇಲ್ವಿಚಾರಣೆಯಲ್ಲಿ ತೊಡಗಿದ್ದಾರೆ ಎಂದು ಯಶೋದಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಹೇಳಿದ್ದಾರೆ.

Share Post