NationalPolitics

ತೆಲಂಗಾಣದಲ್ಲಿ ಬಿಜೆಪಿಗೆ ಜನಸೇನಾ ಪಾರ್ಟಿ ಬೆಂಬಲ; ಪವನ್‌ ಕಲ್ಯಾಣ್‌ ಘೋಷಣೆ

ಹೈದರಾಬಾದ್‌;  ತೆಲುಗು ರಾಜ್ಯಗಳ ಪರಿಸ್ಥಿತಿ ನೋಡಿದರೆ ಐದು ವರ್ಷಕ್ಕೊಮ್ಮೆ ಇಲ್ಲಿ ಚುನಾವಣೆ ನಡೆಯುತ್ತೆ ಅಂತ ಅನಿಸುತ್ತಿಲ್ಲ, ಬದಲಾಗಿ, ಐದು ವರ್ಷವೂ ಚುನಾವಣೆ ನಡೆಯುತ್ತದೆ ಎನಿಸುತ್ತದೆ ಎಂದು ಜನಸೇನೆಯ ಪವನ್ ಕಲ್ಯಾಣ್ ಹೇಳಿದ್ದಾರೆ.

ಇಂತಹ ಸಂಘರ್ಷದ ವಾತಾವರಣದಿಂದಾಗಿ ನಿಜವಾದ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ತೆಲಂಗಾಣ ಭಾಗವತದ ಜನ್ಮಸ್ಥಳ, ಇಲ್ಲಿನ ಬದುಕು ಹೊರೆಯಾಗಬಾರದು, ಮೋದಿ ನೇತೃತ್ವದಲ್ಲಿ ಬಿ.ಸಿ.ತೆಲಂಗಾಣ ಬರಬೇಕು, ಸಾಮಾಜಿಕ ತೆಲಂಗಾಣ ಎತ್ತಿ ಹಿಡಿಯಬೇಕು ಎಂದು ಪವನ್‌ ಕಲ್ಯಾಣ್‌ ಇದೇ ವೇಳೆ ಹೇಳಿದ್ದಾರೆ.

ತೆಲಂಗಾಣದಲ್ಲಿ ಹಿಂದುಳಿದ ವರ್ಗದವರು ಮುಖ್ಯಮಂತ್ರಿಯಾಗಲು ಬಯಸುತ್ತಿದ್ದು, ಇದಕ್ಕಾಗಿ ಬಿಜೆಪಿ ಮತ್ತು ಮೋದಿಗೆ ಜನಸೇನೆ ಸಂಪೂರ್ಣ ಬೆಂಬಲ ಘೋಷಿಸಲಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

Share Post