National

ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕ್‌ ನುಸುಳುಕೋರನ ಹತ್ಯೆ

ಶ್ರೀನಗರ : ಕುಪ್ವಾರ ಜಿಲ್ಲೆಯಲ್ಲಿ ಕಾಶ್ಮೀರದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಸೇನಾಪಡೆ ಹತ್ಯೆ ಮಾಡಿದೆ. ವ್ಯಕ್ತಿಯಿಂದ ಎಕೆ -೪೭ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಕದನ ವಿರಾಮ ಉಲ್ಲಂಘನೆಯಾಗುತ್ತಿರುವ ವೇಳೆ ಕುಪ್ವಾರ ಜಿಲ್ಲೆಯಲ್ಲಿ ಜನವರಿ ೧ರಂದು ವ್ಯಕ್ತಿಯೊಬ್ಬ ನುಸುಳಲು ಪ್ರಯತ್ನಿಸಿದ್ದ. ಇದಕ್ಕೆ ಪ್ರತಿಯಾಗಿ ಕಾರ್ಯಾಚರನೆ ಕೈಗೊಂಡ ಸೇನಾ ಪಡೆ ಹತ್ಯೆ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹತ್ಯೆಗೊಳಗಾದವನ ಹೆಸರು ಮೊಹಮ್ಮದ ಶಬ್ಭೀರ್‌ ಮಲಿಕ್‌ ಎಂದು ಗುರುತಿಸಲಾಗಿದೆ.

ಗಡಿ ನಿಯಂತ್ರಣ ರೇಖೆ ಬಳಿ ಸುಮಾರು ಮಧ್ಯಾಹ್ನ ೩ ಗಂಟೆಗೆ ವ್ಯಕ್ತಿ ನುಸುಳಲು ಪ್ರಯತ್ನ ನಡೆಸಿದ್ದು ಸೇನಾ ತಂಡಕ್ಕೆ ತಿಳಿದು ಬಂದಿದೆ. ತಕ್ಷಣವೇ ಅವನನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ. ಅವನ ಬಳಿ ೭ ಗ್ರೆನೇಡ್‌ ಮತ್ತು ಇನ್ನಿತರ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Share Post