National

ಗಣರಾಜ್ಯೋತ್ಸ ಪರೇಡ್‌ಗೆ ನೌಕಾಪಡೆ ಸಿಬ್ಬಂದಿಯ ಮನಮೋಹಕ ತಾಲೀಮು

ದೆಹಲಿ: ಕೊರೊನಾ ಮೂರನೇ ಅಲೆ ನಡುವೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಲಿದೆ. ಈ ವೇಳೆ ಭಾರತೀಯ ಸೇನೆಯಿಂದ ಪರೇಡ್‌ ನಡೆಯುವುದು ದಶಕಗಳ ಕಾಲದಿಂದ ಬಂದಿರುವ ಆಚರಣೆ. ಅದಕ್ಕೂ ಮುನ್ನ  ಇಂದು ಬೆಳಗಿನ ಜಾವ ವಿಜಯ್ ಚೌಕ್‌ನಲ್ಲಿ ನೌಕಾಪಡೆ ಸಿಬ್ಬಂದಿಯ ತಾಲೀಮು ಭರ್ಜರಿಯಾಗಿ ನಡೆದಿದೆ. ನಡುಗುವ ಚಳಿಯಲ್ಲಿ ಯೋಧರ ಪೂರ್ವಾಭ್ಯಾಸ ಕಣ್ಣಿಗೆ ಕಳೆ ಕಟ್ಟಿದಂತಿದೆ.

ನಸು ಮುಂಜಾವಿನಲ್ಲಿ ಶಿಸ್ತಿನ ಸಿಪಾಯಿಗಳಾಗಿ ಪೂರ್ವಾಭ್ಯಾಸದಲ್ಲಿ ತೊಡಗಿದ್ದಾರೆ. ಸುತ್ತಲಿನ ಪರಿಸರ, ಬೀದಿದೀಪಗಳ ಬೆಳಕಿಗೆ ಹಬ್ಬದ ಕಳೆ ಬಂದಂತಿದೆ. ನೌಕಾಪಡೆ ತಾಲೀಮು ನಡೆಸುವ ಮೊದಲು ವಾರ್ಮ್‌ ಅಪ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Share Post