NationalPolitics

ಬಂಡಾಯ ಹಿನ್ನೆಲೆ; ಏಳು ಬಿಜೆಪಿ ಮುಖಂಡರ ಅಮಾನತು

ಅಹಮದಾಬಾದ್; ಅಶಿಸ್ತು ತೋರಿದ ಗುಜರಾತ್‌ ಬಿಜೆಪಿಯ ಏಳು ನಾಯಕರನ್ನು ಅಮಾನತುಗೊಳಿಸಲಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಗೆ ಕೇವಲ ಎರಡು ವಾರಗಳಿರುವಂತೆಯೇ ಈ ಬೆಳವಣಿಗೆ ನಡೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರು ಮಾಜಿ ಶಾಸಕರು ಸೇರಿದಂತೆ ಏಳು ಮುಖಂಡರು ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.

ಹರ್ಷದ್ ವಾಸವ, ಅರವಿಂದ ಲಡಾನಿ, ಛತ್ರಸಿನ್ಹ ಗುಂಜಾರ, ಕೇತನ್, ಭರತ್ ಚಾವ್ಡಾ, ಉದಯ್ ಶಾ ಮತ್ತು ಕರಣ್ ಭರಯ್ಯ ಅಮಾನತುಗೊಂಡ ಬಿಜೆಪಿ ಮುಖಂಡರು. ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಸೂಚನೆ ಮೇರೆಗೆ ಇವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Share Post