National

ಬೆಲೆ ಏರಿಕೆ ವಿರುದ್ಧ ಹೋರಾಟ; 19 ರಾಜ್ಯಸಭಾ ಸದಸ್ಯರ ಅಮಾನತು

ನವದೆಹಲಿ; ಬೆಲೆ ಏರಿಕೆ ವಿಚಾರವಾಗಿ ಸಂಸತ್ತಿನಲ್ಲಿ ವಿಪಕ್ಷಗಳ ಗದ್ದಲ ಮುಂದುವರೆದಿದೆ. ನಿನ್ನೆ ಗದ್ದಲ ಮಾಡಿದ ನಾಲ್ವರು ಲೋಕಸಭಾ ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಈಗ ರಾಜ್ಯಸಭಾ ಸದಸ್ಯರ ಸರದಿ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ  19 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರದ ಕಾಲ ಅಮಾನತು ಮಾಡಲಾಗಿದೆ.

ಬೆಲೆ ಏರಿಕೆ, ಜಿಎಸ್‌ಟಿ ವಿರೋಧಿಸಿ ಟಿಎಂಸಿ, ಡಿಎಂಕೆ ಸೇರಿ ಹಲವು ವಿಪಕ್ಷಗಳ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದರು. ಜೊತೆಗೆ ಸಭಾಪತಿ ಪೀಠದ ಎದುರು ಬಂದು ಫಲಕಗಳನ್ನು ಪ್ರದರ್ಶನ ಮಾಡಿದರು. ಈ ಹಿನ್ನೆಲೆಯಲ್ಲಿ 19 ಸದಸ್ಯರು ಅಮಾನತು ಮಾಡಲಾಯಿತು.

Share Post