National

ಅಗ್ನಿಪತ್‌ ಬೆಂಬಲಿಸಿದ ಕಾಂಗ್ರೆಸ್‌ ಸಂಸದ ಮನೀಶ್ ತಿವಾರಿ

ನವದೆಹಲಿ; ‌ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್‌ ಯೋಜನೆ ವಿರುದ್ಧ ಕಾಂಗ್ರೆಸ್‌ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಆದ್ರೆ ಅದೇ ಪಕ್ಷದ ಸಂಸದ ಮನಿಶ್‌ ತಿವಾರಿ ಈ ಯೋಜನೆಯನ್ನು ಬೆಂಬಲಿಸಿದ್ದಾರೆ. ಖಾಸಗಿ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಮನಿಶ್‌ ತಿವಾರಿ, ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ನೇಮಕಾತಿ ಸುಧಾರಣೆಗಳ ಪರವಾಗಿ ಬರೆದುಕೊಂಡಿದ್ದರು.

ಆದ್ರೆ ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್‌ ನಾಯಕ ಜಯರಾಮ್‌ ರಮೇಶ್‌, ಕಾಂಗ್ರೆಸ್ ದೇಶದ ಏಕೈಕ ಪ್ರಜಾಸತ್ತಾತ್ಮಕ ಪಕ್ಷವಾಗಿದ್ದು, ಮನೀಶ್ ಅಭಿಪ್ರಾಯ ವೈಯಕ್ತಿಕವಾಗಿದ್ದು, ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ತಿವಾರಿ, ಲೇಖನದ ಟ್ಯಾಗ್ ಲೈನ್ ವೈಯಕ್ತಿಯ ಅಭಿಪ್ರಾಯ ಎಂದು ಹೇಳುತ್ತಿದೆ. ಜೈರಾಮ್ ರಮೇಶ್ ಅದನ್ನು ಕೊನೆಯವರೆಗೂ ಓದುತ್ತಾರೆ ಎಂದು ಬಯಸುತ್ತೇನೆ ಎಂದಿದ್ದಾರೆ.

 

Share Post