BengaluruNational

ಬೆಂಗಳೂರಿಂದ ಪಾಟ್ನಾ ಹೊರಟ್ಟಿದ್ದ ವಿಮಾನ ಎಂಜಿನ್‌ ದೋಷದಿಂದ ತುರ್ತು ಭೂ ಸ್ಪರ್ಶ

ನಾಗಪುರ : 139 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಪಾಟ್ನಾಗೆ ಹೊರಟ್ಟಿದ್ದ ʼಗೋ ಏರ್‌ʼ ವಿಮಾನ ನಾಗ್ಪುರದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಎಂಜಿನ್‌ ಅಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆ ತುರ್ತು ಭೂ ಸ್ಪರ್ಶ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗೋ ಏರ್‌ ವಿಮಾನದ  ಪೈಲಟ್‌ ಎಂಜಿನ್‌ ದೋಷದ ವಿಚಾರ ತಿಳಿಸಿ ತುರ್ತು ಭೂ ಸ್ಪರ್ಶಕ್ಕೆ ಅನುಮತಿ ನೀಡಬೇಕೆಂದು ನಾಗಪುರ ಎಟಿಸಿಯನ್ನು ಮನವಿ ಮಾಡಿದ್ದಾರೆ.  ಯಾವುದೇ ಅಪಾಯ ಸಂಭವಿಸದೆ ವಿಮಾನ 11.15ಕ್ಕೆ ಲ್ಯಾಂಡ್‌ ಆಗಿದೆ.

ತುರ್ತು ಭೂ ಸ್ಪರ್ಶಕ್ಕೆ ಸಕಲ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೆವು, ಆದರೆ ಅದೇಷ್ಟವಶಾತ್‌ ಯಾವ ಅವಘಡಗಳೂ ಸಂಭವಿಸಿಲ್ಲ. ಇನ್ನು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಅಬಿಗ್‌ ರೂಹಿ ಹೇಳಿದ್ದಾರೆ

Share Post