LifestyleNationalPolitics

ಮೈಸೂರು ದಸರಾ ವೇಳೆ ವಿಶೇಷ ಏರ್‌ ಶೋ ನಡೆಸಲು ಸಿಎಂ ಸಿದ್ದರಾಮಯ್ಯ ಮನವಿ

ನವದೆಹಲಿ; ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಏರ್‌ ಶೋ ನಡೆಸಲಾಗುತ್ತದೆ. ಅದರಂತೆ ಮೈಸೂರಿನಲ್ಲಿ ದಸರಾ ವೇಳೆ ವಿಶೇಷ ಏರ್‌ ಶೋ ನಡೆಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ, ವಾಯಪಡೆಗಳಿಂದ ವಿಶೇಷ ಏರ್‌ ಶೋ ನಡೆಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಾರಿ ಅಕ್ಟೋಬರ್‌ 15-24ರವರೆಗೆ ದಸರಾ ಉತ್ಸವಗಳು ನಡೆಯಲಿದೆ. ಈ ಸಮಯದಲ್ಲಿ ಲಕ್ಷಾಂತರ ಜನರು ದೇಶ ವಿದೇಶಗಳಿಂದ ಜನರು ಬರುತ್ತಾರೆ. ಈ ವೇಳೆ ವಿಶೇಷ ಏರ್‌ ಶೋ ನಡೆಸಿದರೆ ಒಳ್ಳೆಯದು ಎಂದು ಸಿಎಂ ಹೇಳಿದ್ದಾರೆ. 2017 ಹಾಗೂ 2019ರಲ್ಲಿ ಟಾರ್ಚ್‌ ಲೈಟ್‌ ಪರೇಡ್‌ ಮೈದಾನದಲ್ಲಿ ವಾಯುಪಡೆಯಿಂದ ವಿಶೇಷ ಏರ್‌ ಶೋ ನಡೆಸಲಾಗಿತ್ತು. ಹೀಗಾಗಿ ಈ ಬಾರಿಯೂ ಇಂತಹ ವಿಶೇಷ ಏರ್‌ ಶೋ ನಡೆಸಲು ಸೂಚನೆ ನೀಡಬೇಕೆಂದು ರಾಜನಾಥ್‌ ಸಿಂಗ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

 

Share Post