NationalScienceTechTechnology

ನಾಳೆ ಚಂದ್ರಯಾನ-೩ ಉಡಾವಣೆ; ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ ಇಸ್ರೋ ತಂಡ

ತಿರುಪತಿ; ನಾಳೆ ಚಂದ್ರಯಾನ-೩ ಉಡಾವಣೆ ಮಾಡಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಈ ನಡುವೆ ಇಸ್ರೋ ವಿಜ್ಞಾನಿಗಳ ತಂಡ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದೆ. ಚಂದ್ರಯಾನ-೩ಗೆ ಯಾವುದೇ ವಿಘ್ನ ಬಾರದಿರಲಿ ಎಂದು ತಿರುಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ಟಾಡೇಕರ್‌ ಹಾಗೂ ಇತರ ವಿಜ್ಞಾನಿಗಳು ಚಂದ್ರಯಾನ-೩ ಮಾದರಿಯೊಂದಿಗೆ ತಿಮ್ಮಪ್ಪನ ದರ್ಶನ ಪಡೆದರು. ಇದೇ ವೇಳ ಮಾತನಾಡಿದ ಶಾಂತನು ಭಟ್ಟಾಚಾರ್ಯ ಅವರು, ನಾಳೆ ಮಧ್ಯಾಹ್ನ 2:35ಕ್ಕೆ ಸರಿಯಾಗಿ ಚಂದ್ರಯಾನ-೩ ಉಡಾವಣೆ ನಡೆಯಲಿದೆ. ಎಲ್‌ಎಂವಿ3 ರಾಕೆಟ್‌ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Share Post