National

ಕೇಂದ್ರ ಬಿಜೆಪಿ ಸರ್ಕಾರ ನನ್ನ ಹತ್ಯೆ ಬಯಸುತ್ತಿದೆ; ರಾಕೇಶ್‌ ಟಿಕಾಯತ್‌

ಮೀರತ್‌; ನಮ್ಮ ಕುಟುಂಬ ಹಾಗೂ ರೈತ ಸಂಘಟನೆಯನ್ನು ಹತ್ತಿಕ್ಕಲು ಕೇಂದ್ರ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಬಿಜೆಪಿ ಸರ್ಕಾರ ನನ್ನನ್ನು ಹತ್ಯೆ ಮಾಡಲು ಯತ್ನಿಸುತ್ತಿದೆ ಎಂದು ಭಾರತೀಯ ಕಿಸಾನ್‌ ಒಕ್ಕೂಟದ(ಬಿಕೆಯು) ಮುಖಂಡ ರಾಕೇಶ್‌ ಟಿಕಾಯತ್‌ ಗಂಭೀರ ಆರೋಪ ಮಾಡಿದ್ದಾರೆ.

ಮೀರತ್‌ ಜಿಲ್ಲೆಯ ಜಂಗೇಠಿ ಗ್ರಾಮದ ಧರ್ಮೇಶ್ವರಿ ತೋಟದಲ್ಲಿ ನಡೆದ ಬಿಕೆಯು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ರಾಕೇಶ್‌ ಟಿಕಾಯತ್‌, ಬೆಂಗಳೂರಿನಲ್ಲಿ ನಡೆದ ರೈತರ ಸಭೆಯ ಸಂದರ್ಭದಲ್ಲಿ ತಮ್ಮ ಮೇಲೆ ಭಾರತೀಯ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಅತ್ಯಂತ ವ್ಯವಸ್ಥಿತ ಪಿತೂರ ಎಂದು ರಾಕೇಶ್‌ ಟಿಕಾಯತ್‌ ದೂಷಿಸಿದ್ದಾರೆ.

ಮಹಾತ್ಮ ಗಾಂಧಿ ಅವರ ಹತ್ಯೆ ಕೂಡಾ ಸಂಚುಕೋರರಿಂದ ನಡೆಯಿತು. ಅದೇ ರೀತಿ ದೇಶದ ಪರವಾಗಿ ಮತ್ತು ರೈತರ ಪರವಾಗಿ ಧ್ವನಿಯೆತ್ತುವ ಜನರನ್ನು ಸಂಚುಕೋರರು ಗುರಿಯಾಗಿಸಿಕೊಂಡಿದ್ದಾರೆ. ಓರ್ವ ಟಿಕಾಯತ್‌ಗೆ ಏನಾದರೂ ಸಂಭವಿಸಿದರೆ ಲಕ್ಷಾಂತರ ಟಿಕಾಯತ್‌ಗಳು ಧ್ವಜವನ್ನು ಹಾರಿಸಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.

 

Share Post