National

ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕಾಪ್ಟರ್

ಜಿಂದ್‌ : ಹರಿಯಾಣದಲ್ಲಿ ಜಿಂದ್‌ ಜಿಲ್ಲೆಯಲ್ಲಿ ಸೇನೆಯ ಹೆಲಿಕಾಪ್ಟ್‌ರ್‌ ತುರ್ತು ಭೂಸ್ಪರ್ಶ ಮಾಡಿದೆ.

ನರ್ವಾಣ ಪಟ್ಟಣದ ಸಮೀಪದ ಜನವಾಲ ಗ್ರಾಮದ ಮೈದಾನವೊಂದರಲ್ಲಿ ಇಳಿದಿರುವ ಹೆಲಿಕಾಪ್ಟರ್‌ನಲ್ಲಿ ಸೇನೆಯ ನಾಲ್ವರು ಸಿಬ್ಬಂದಿ ಇದ್ದರು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ಬಿಪಿನ್‌ ರಾವತ್‌ ಅವರ ದುರಂತ ಮಾಸುವ ಮುನ್ನವೇ ಈ ಅವಘಡ ನಡೆದಿರುವುದರಿಂದ ಸೇನಾ ತಂಡ ಗಾಬರಿಯಾಗಿದೆ ಅಷ್ಟೇ. ಇನ್ನು ವಿಷಯ ತಿಳಿದ ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮನ್‌ ಅಮನ್‌ ಸಿಂಗ್‌ ಅವರು ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ,

Share Post