NationalPolitics

ನಾಲ್ಕು ದಿನಗಳ ಬಳಿಕ ಎಲ್ಲವೂ ಸುಸೂತ್ರ; ಶನಿವಾರ ಪ್ರಮಾಣ

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ಸಾಧಿಸಿದ್ದರೂ, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಯಾಕಂದ್ರೆ ಸಂಭ್ರಮದ ಹಿಂದೆಯೇ ಸಿಎಂ ಯಾರಾಗ್ತಾರೆ ಎಂಬ ವಿಚಾರ ಸಂಭ್ರಮವನ್ನು ಮಾಯ ಮಾಡಿತ್ತು. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕಸರತ್ತು ಕೊನೆಗೂ ಸುಖಾಂತ್ಯವಾಗಿದೆ. ಸಿದ್ದರಾಮಯ್ಯ ಸಿಎಂ ಆಗೋದಕ್ಕೆ ಡಿ.ಕೆ.ಶಿವಕುಮಾರ್‌ ಒಪ್ಪಿಕೊಂಡಿದ್ದಾರೆ.

ಈಗ ಇಬ್ಬರೂ ಮುನಿಸು ಮರೆತು ಒಂದಾಗಿದ್ದಾರೆ. ಕೆ.ಸಿ.ವೇಣುಗೋಪಾಲ್‌ ಮನೆಯಲ್ಲಿ ಒಟ್ಟಿಗೆ ಕೂತು ತಿಂಡಿ ತಿದ್ದಿದ್ದಲ್ಲದೆ, ಖರ್ಗೆ ಮನೆಯಲ್ಲಿ ಕೈಹಿಡಿದೆತ್ತುವ ಮೂಲಕ ಇಬ್ಬರೂ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈಗ ಎಲ್ಲವೂ ಸುಸೂತ್ರವಾಗಿ ನಡೆದಿದೆ.

ಶನಿವಾರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಅನಂತರ ಯಾವಾಗ ಸಂಪುಟ ಸಭೆ ನಡೆಯುತ್ತೆ, ಮೊದಲ ಸಂಪುಟ ಸಭೆಯಲ್ಲಿ ಐದು ಗ್ಯಾರೆಂಟಿಗಳಿಗೆ ಒಪ್ಪಿಗೆ ಸಿಗುತ್ತಾ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

Share Post