National

ಸಮುದ್ರದಲ್ಲಿ ತೇಲಿ ಬಂದ ಚಿನ್ನದ ಬಣ್ಣದ ರಥ

ಅಮರಾವತಿ: ಅಸನಿ ಚಂಡಮಾರುತದ ಪ್ರಭಾವ ಜೋರಾಗಿದೆ. ಆಂಧ್ರಪ್ರದೇಶದ ಮೇಲೆ ಈ ಚಂಡಮಾರುತ ಹೆಚ್ಚುವ ಪ್ರಭಾವ ಬೀರಿದೆ. ಇಲ್ಲಿ ಸಮುದ್ರ ತೀರ ಪ್ರಾಂತ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಜೊತೆಗೆ ಸಮುದ್ರಲ್ಲಿ ಅಲೆಗಳ ಅಬ್ಬರ ಕೂಡಾ ಜೋರಾಗಿದೆ. ಈ ನಡುವೆ ಅಲೆಗಳ ನಡುವೆ ಚಿನ್ನದ ಬಣ್ಣದ ರಥವೊಂದು ತೇಲುಬಂದಿದೆ. ಬೇರೆ ದೇಶದಿಂದ ಈ ರಥ ತೇಲಿಬಂದಿರಬಹುದು ಎಂದು ಹೇಳಲಾಗುತ್ತಿದೆ.

ಶ್ರೀಕಾಕುಳಂನ ಸುನ್ನಪಲ್ಲಿ ಬಂದರಿನ ದಡಕ್ಕೆ ಚಿನ್ನದ ಬಣ್ಣದ ರಥವೊಂದು ತೇಲಿಬಂದಿದೆ. ಅದನ್ನು ಮೀನುಗಾರರು ದಡಕ್ಕೆ ತಂದಿದ್ದಾರೆ. ದಡಕ್ಕೆ ಬಂದ ರಥವನ್ನು ಮೀನುಗಾರು ಹಾಗೂ ಸ್ಥಳೀಯ ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ರಥ ಬೇರೆ ದೇಶದಿಂದ ಬಂದಿರಬಹುದು. ಇದರ ಬಗ್ಗೆ ನಾವು ಗುಪ್ತಚರ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಎಸ್‌ಐ ನೌಪಾದ ಹೇಳಿದ್ದಾರೆ.

Share Post