LifestyleNational

ಪ್ರಧಾನಿ ಹೆಸರು ಹೇಳದ ವರ; ಮತ್ತೊಬ್ಬನ ಜತೆ ಮದುವೆಯಾದ ವಧು..!

ಗಾಜಿಪುರ; ಇದೊಂದು ವಿಚಿತ್ರ ಘಟನೆ. ಗಂಡನಿಗೆ ದೇಶದ ಪ್ರಧಾನಿ ಹೆಸರು ಗೊತ್ತಿಲ್ಲದ್ದಕ್ಕೆ ಅವಮಾನ ಎಂದು ಭಾವಿಸಿದ ವಧು, ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಸಾಲದೆಂಬಂತೆ ವರನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾಳೆ. ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ರಂಜನಾ ಹಾಗೂ ಶಿವಶಂಕರ್‌ ಎಂಬುವವರಿಗೆ ಹಿರಿಯರು ಆರು ತಿಂಗಳ ಹಿಂದೆ ಮದುವೆ ಮಾಡಿಸಿದ್ದರು. ಗಾಜಿಪುರ ಬಳಿಯ ಸೈದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಮದುವೆ ನಡೆದಿತ್ತು. ಆದ್ರೆ ಇಬ್ಬರೂ ಬೇರೆ ಬೇರೆ ಕಡೆ ಕೆಲಸ ಮಾಡಿದ್ದರಿಂದ ದೂರವೇ ಉಳಿದಿದ್ದರು. ಬರೀ ಮೊಬೈಲ್‌ನಲ್ಲೇ ಮಾತನಾಡುತ್ತಿದ್ದರು. ಆದ್ರೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಭಾಗವಹಿಸಿದ್ದರು. ಈ ವೇಳೆ ವಧು ರಂಜನಾ ಹಾಗೂ ಅವರ ಕಡೆಯವರು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದ್ದಾರೆ. ದೇಶದ ಪ್ರಧಾನಿ ಯಾರೆಂದು ಕೇಳಿದ್ದಾರೆ. ಆದ್ರೆ ಶಿವಶಂಕರ್‌ ಇದಕ್ಕೆ ಉತ್ತರಿಸಿಲ್ಲ. ಹೀಗಾಗಿ ವಧುವಿನ ಕಡೆಯವರು ನೀನು ದಡ್ಡ ಎಂದು ಮೂದಲಿಸಿದ್ದಾರೆ. ಇದರಿಂದ ವಧು ರಂಜನಾ ಅವಮಾನವಾದಂತಾಗಿದೆ.

ಕೂಡಲೇ ಆಕೆ ಶಿವಶಂಕರ್‌ ಜೊತೆಗಿನ ಮದುವೆ ಕ್ಯಾನ್ಸಲ್‌ ಮಾಡಿದ್ದಾಳೆ. ಜೊತೆಗೆ ಸ್ಥಳದಲ್ಲೇ ಶಿವಶಂಕರ್‌ ಕಿರಿಯ ಸಹೋದರ ಅನಂತ್‌ ಎಂಬಾತನನ್ನು ಮದುವೆಯಾಗಿದ್ದಾಳೆ.  ಇನ್ನು ಶಿವಶಂಕರ್ ಜೊತೆ ಬಂದಿದ್ದ ಚಿಕ್ಕಪ್ಪ ರಾಮ್ ಅವತಾರ್ ಅವರು ಅನಂತನನ್ನು ಮದುವೆಯಾಗುವುದನ್ನು ವಿರೋಧಿಸಿದರು. ಆದರೂ ವಧು ಕೇಳದೆ ಮದುವೆಯಾಗಿದ್ದಾಳೆ. ಈ ವಿಚಾರ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

Share Post