International

NAVEEN DEATH CASE; ಮಕ್ಕಳನ್ನು ಚೆನ್ನಾಗಿ ಓದಿಸಲೆಂದು ಕೆಲಸ ಅರಸಿ ಸೌದಿಗೆ ಹೋಗಿದ್ದ ತಂದೆ

ಹಾವೇರಿ; ಉಕ್ರೇನ್‌ನಲ್ಲಿ ಸಾವನ್ನಪ್ಪಿರುವ ನವೀನ್‌ ತಂದೆ ಶೇಖರ್‌ ಗೌಡರ್ ಡಿಪ್ಲೋಮಾ ವ್ಯಾಸಂಗ ಮಾಡಿದ್ದು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಶ್ರಮಿಸಿದ್ದಾರೆ. ಮಕ್ಕಳನ್ನು ಚೆನ್ನಾಗಿ ವಿಧ್ಯಾವಂತರನ್ನಾಗಿ ಮಾಡುವ ಉದ್ದೇಶದಿಂದಲೇ ಅವರು ಸೌದಿಗೆ ಹೋಗಿ ಅಲ್ಲಿ ಕೆಲ ವರ್ಷ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು.

ಸೌದಿಯಲ್ಲಿ ಒಂದಷ್ಟು ಸಂಪಾದನೆ ಮಾಡಿಕೊಂಡು ಬಂದಿದ್ದ ನವೀನ್‌ ತಂದೆ ಶೇಖರ್‌ ಗೌಡರ್‌, ತನ್ನ ಇಬ್ಬರು ಗಂಡು ಮಕ್ಕಳನ್ನು ಚೆನ್ನಾಗಿ ಓದಿಸಿದ್ದರು. ಮೊದಲ ಮಗ ಪಿಎಚ್‌ಡಿ ಮಾಡಿದ್ದು, ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ಎರಡನೇ ಮಗನೇ ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ತುತ್ತಾಗಿರುವ ನವೀನ್‌. ಇನ್ನು ಒಂದು ವರ್ಷ ಮುಗಿದಿದ್ದರೆ ನವೀನ್‌ ಕೂಡಾ ಭಾರತಕ್ಕೆ ಬಂದು ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಆದ್ರೆ, ವಿಧಿಬರಹವೇ ಬೇರೆಯಾಗಿತ್ತು.

Share Post