International

ಇಷ್ಟವಿದ್ದರೆ ಇಮ್ರಾನ್‌ ಖಾನ್‌ ಭಾರತಕ್ಕೇ ಹೋಗಲಿ; ಪಾಕ್‌ ವಿಪಕ್ಷ ನಾಯಕಿ ಮರ್ಯಮ್‌

ಇಸ್ಲಾಮಾಬಾದ್‌: ಇಮ್ರಾನ್‌ ಖಾನ್‌ಗೆ ಹುಚ್ಚು ಹಿಡಿದಿದೆ. ಅವರಿಗೆ ಭಾರತ ಅಷ್ಟು ಇಷ್ಟವಾಗಿದ್ದರೆ ಅಲ್ಲಿಗೇ ಹೋಗಲಿ. ಪಾಕಿಸ್ತಾನದಲ್ಲಿನ ಬದಕನ್ನು ತ್ಯಜಿಸಲಿ ಎಂದು ಪಾಕಿಸ್ತಾನದ ಸರ್ಕಾರದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ವಾಗ್ದಾಳಿ ನಡೆಸಿದ್ದಾರೆ.

ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಇಮ್ರಾನ್‌ ಖಾನ್‌ ಅವರು ಶುಕ್ರವಾರ ದೇಶವನ್ನು ಉದ್ದೇಶಿ ಮಾತನಾಡಿದ್ದರು. ಈ ವೇಳೆ ಅವರು, ಭಾರತವನ್ನು ಅತ್ಯಂತ ಘನತೆಯ ರಾಷ್ಟ್ರ ಎಂದು ಕರೆದಿದ್ದರು. ಯಾವುದೇ ಮಹಾಶಕ್ತಿಯು ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಅವರು ಹೊಗಳಿದ್ದರು. ಈ ಹಿನ್ನೆಲೆಯಲ್ಲಿ ಮರ್ಯಮ್‌ ನವಾಜ್‌ ಅವರು ಇಮ್ರಾನ್‌ ವಿರುದ್ಧ ಕಿಡಿಕಾರಿದ್ದಾರೆ. ಇಮ್ರಾನ್‌ ಖಾನ್‌ ಒಬ್ಬ ಹುಚ್ಚ ಎಂದೂ ಕಿಡಿ ಕಾರಿದ್ದಾರೆ.

Share Post