CrimeInternational

ದುಬೈನಲ್ಲಿ ಬೆಂಕಿ ದುರಂತ; ಪ್ರವಾಸಕ್ಕೆ ಹೋಗಿದ್ದ ಬೆಳಗಾವಿಯ ನಾಲ್ವರ ದುರ್ಮರಣ!

ಬೆಳಗಾವಿ(Belagavi); ದುಬೈನಲ್ಲಿ ನಡೆದ ಬೆಂಕಿ ದುರಂತವೊಂದರಲ್ಲಿ ಬೆಳಗಾವಿ ಮೂಲದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.. ಒಮಾನ್‌ನಲ್ಲಿ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.. ಇದರಿಂದಾಗಿ ಗೋಕಾಕ್‌ ನಗರದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಮದುವೆಯಾಗಿ ಮಕ್ಕಳು ಮಾಡಿಕೊಂಡ್ರೆ ಸರ್ಕಾರ 31 ಲಕ್ಷ ರೂಪಾಯಿ ಕೊಡುತ್ತೆ!

ಇವರು ಹೈಮಾ ಪ್ರದೇಶದಲ್ಲಿ ಕುಟುಂಬದೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು.. ಈ ವೇಳೆ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿದೆ.. ಇದ್ರಿಂದಾಗಿ ನಾಲ್ವರೂ ಸಜೀವದಹನವಾಗಿದ್ದಾರೆ.. ಮೃತರನ್ನು ಪವನ್‌ ಕುಮಾರ್‌, ಆದಿಶೇಷ, ವಿಜಯಾ ತಹಸೀಲ್ದಾರ್‌, ಪೂಜಾ ಎಂದು ಗುರುತಿಸಲಾಗಿದೆ.. ಇವರು ಒಮಾನ್‌ಗೆ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.. ಮೃತದೇಹಗಳನ್ನು ಭಾರತಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ..

Share Post