International

ಹಿಮಕುಸಿತದಲ್ಲಿ ಸಿಲುಕಿರುವ ಏಳು ಮಂದಿ ಯೋಧರ ರಕ್ಷಣಾ ಕಾರ್ಯಾಚರಣೆ

ಅರುಣಾಚಲ ಪ್ರದೇಶ: ಇಲ್ಲಿನ ಕಮೆಂಗ್ ಸೆಕ್ಟರ್‌ನಲ್ಲಿ ಹಿಮಪಾತದಲ್ಲಿ ಸಿಲುಕಿರುವ ಏಳು ಮಂದಿ ಯೋಧರನ್ನು ರಕ್ಷಿಸುವ ಸಲುವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.  ಭಾನುವಾರದಂದು ಎತ್ತರದ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದ ಕಾರಣ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ  ಏಳು ಮಂದಿ ಸೇನಾ ಸಿಬ್ಬಂದಿ ಸಿಲುಕಿದ್ದಾರೆ ಎನ್ನಲಾಗಿದೆ.

“ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಹಿಮಕುಸಿತದಲ್ಲಿ ಸಿಲುಕಿದ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ” ಎಂದು ಭಾರತೀಯ ಸೇನೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದೊಂದಿಗೆ ಈ ಪ್ರದೇಶವು ಪ್ರತಿಕೂಲ ಹವಾಮಾನದಿಂದ ಕೂಡಿದ್ದು, ಎಚ್ಚರವಾಗಿರುವಂತೆ ಸೂಚಿಸಿದೆ.

 

Share Post