CrimeDistricts

ಸಂಚಾರದ ಮೇಲೆ ಕಳಚಿದ ಸರ್ಕಾರಿ ಬಸ್‌ ಟೈರ್‌ಗಳು..!

ಹುಣಸೂರು; ಕೆಎಸ್ ಆರ್ ಟಿಸಿ ಬಸ್ ನ ಬ್ಲೇಡ್ ತುಂಡಾಗಿ ಹಿಂಬದಿಯ ಚಕ್ರಗಳು ಕಳಚಿಕೊಂಡು ಆತಂಕ ಸೃಷ್ಟಿಸಿದ ಘಟನೆ ಹುಣಸೂರು ತಾಲೂಕಿನ ಯಶೋಧರಪುರ ಗೇಟ್ ನಲ್ಲಿ ನಡೆದಿದೆ.

ಕೆ.ಆರ್.ನಗರ ಡಿಪೋಗೆ ಸೇರಿದ ಬಸ್ ಸೋಮವಾರಪೇಟೆ ಕಡೆಯಿಂದ ಮೈಸೂರಿಗೆ ಬರುತ್ತಿದ್ದಾಗ ಹುಣಸೂರು ತಾಲೂಕಿನ ಯಶೋಧರಪುರ ಗೇಟ್ ಬಳಿಯ ಹಂಪ್ಸ್ ಮೇಲೆ ವೇಗವಾಗಿ ಓಡಿಸಿದ್ದರಿಂದ ಬಸ್ ನ ಹಿಂಬದಿಯ ಬ್ಲೇಡ್ ತಂಡಾಗಿ, ಹೌಸಿಂಗ್ ಸಹಿತ ಚಕ್ರಗಳು ಕಳಚಿ ಬಿದ್ದಿವೆ.

ಇನ್ನು ಬಸ್ನ ಹಿಂದೆ ಯಾವುದೇ ವಾಹನಗಳು ಇಲ್ಲದ್ದರಿಂದ ಯಾವುದೇ ಅನಾಹುತವಾಗಲಿಲ್ಲ, ಅಲ್ಲದೆ ಬಸ್ನಲ್ಲಿದ್ದ 39 ಮಂದಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ.

Share Post