CrimeDistricts

ಭದ್ರಾವತಿಯಲ್ಲಿ ಯುವಕನಿಗೆ ಚಾಕು ಇರಿತ; ಅನ್ಯಕೋಮಿನ ಯುವಕರಿಂದ ಕೃತ್ಯ

ಶಿವಮೊಗ್ಗ; ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಂದಕುಮಾರ್‌ ಎಂಬ 32 ವರ್ಷದ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಭದ್ರಾವತಿಯ ಹನುಮಂತನಗರ ಬಡಾವಣೆಯಲ್ಲಿ ಈ ಕೃತ್ಯ ಎಸಗಲಾಗಿದ್ದು, ಗಾಯಾಳುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನ್ಯಕೋಮಿನ ಯುವಕರ ಗುಂಪು ಈ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ನಿನ್ನೆ ನಂದಕುಮಾರ್‌ಗೆ ಕರೆ ಮಾಡಿದ್ದ ಗುಂಪು ನಿನ್ನ ಮೊಬೈಲ್‌ ಕೊಡು ಎಂದು ಕೇಳಿದೆ. ಆದ್ರೆ ನಂದಕುಮಾರ್‌ ಮೊಬೈಲ್‌ ಕೊಡೋದಕ್ಕೆ ನಿರಾಕರಿಸಿದ್ದಾನೆ. ಇದರಿಂದಾಗಿ ನಂದಕುಮಾರ್‌ನನ್ನು ಹುಡುಕಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನಂದಕುಮಾರ್‌ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ವಾಪಸ್‌ ಬರುವಾಗ ಮತ್ತೆ ಬಂದ ಗುಂಪು ಚಾಕುವಿನಿಂದ ಬೆನ್ನಿಗೆ ಇರಿದಿದೆ ಎಂದು ತಿಳಿದುಬಂದಿದೆ.

 

Share Post