DistrictsPolitics

ಯುವ ಲಿಂಗಾಯತರನ್ನು ಬೆಳೆಸ್ತೀವಿ, ಹಿರಿಯರು ಹೋದ್ರೆ ತೊಂದ್ರೆ ಇಲ್ಲ; ಅರುಣ್‌ ಸಿಂಗ್‌

ಕಲಬುರಗಿ; ಬಿಜೆಪಿ ಪಕ್ಷ ಲಿಂಗಾಯತರಿಗೆ ಹೆಚ್ಚಿ ಪ್ರಾಶಸ್ತ್ಯ ನೀಡಿತ್ತು. ಆದರೂ ಜಗದೀಶ್‌ ಶೆಟ್ಟರ್‌ ಹಾಗೂ ಸವದಿ ಮುಂತಾದವರು ಪಕ್ಷ ಬಿಟ್ಟು ಹೋಗಿದ್ದಾರೆ. ಇದರಿಂದ ನಮಗೇನೂ ಬೇಸರವಿಲ್ಲ. ಅವರ ಜಾಗದಲ್ಲಿ ಯುವ ಲಿಂಗಾಯತ ನಾಯಕರನ್ನು ಬೆಳೆಸುತ್ತೇನೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ಅವರು ಮಾತನಾಡಿದರು.

ಕಲಬುರಗಿ ಉತ್ತರ ‌ಕ್ಷೇತ್ರದ ಅಭ್ಯರ್ಥಿ ಚಂದು ಪಾಟೀಲ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಇಬ್ಬರು ಹಿರಿಯ ನಾಯಕರು ಬಿಟ್ಟು ಹೋಗಿದ್ದಾರೆ. ಅದರಿಂದ ಪಕ್ಷದ ಮೇಲೆ ಯಾವುದೇ ಪರಿಂಆನ ಬೀರುವುದಿಲ್ಲ. ನಾವು ಯುವ ನಾಯಕರನ್ನು ಮುಂದಿಟ್ಟುಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.

Share Post