Districts

ಇವತ್ತು ರಾಜ್ಯಕ್ಕೆ ಕರಾಳ ಶನಿವಾರ; ಬೀದರ್‌ನಲ್ಲೂ ಬಸ್‌ ಪಲ್ಟಿ

ಬೀದರ್: ಇವತ್ತು ಕರ್ನಾಟಕಕ್ಕೆ ಕರಾಳ ಶನಿವಾರ. ಯಾಕಂದ್ರೆ, ಬೆಳ್ಳಬೆಳಗ್ಗೆ ತುಮಕೂರು ಜಿಲ್ಲೆ ಪಾವಗಡ ಬಳಿ ಅಪಘಾತವಾಗಿ ಖಾಸಗಿ ಬಸ್‌ನಲ್ಲಿದ್ದ ಐದು ಮಂದಿ ಸಾವನ್ನಪ್ಪಿದ್ದರು. ಈಗ ಬೀದರ್‌ನಲ್ಲೂ ಖಾಸಗಿ ಬಸ್ಸೊಂದು ಪಲ್ಟಿಯಾಗಿದೆ. ಘಟನೆಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಬೀದರ್‌ಗೆ ಬರುತ್ತಿದ್ದ ಖಾಸಗಿ ಟ್ರಾವೆನ್ಸ್‌ ಬಸ್‍ಗೆ ಬೈಕ್ ಅಡ್ಡ ಬಂದಿದ್ದರಿಂದಾಗಿ ಈ ದುರ್ಘಟನೆ ನಡೆದಿದೆ. ಬೈಕ್‌ ಅಡ್ಡ ಬಂದಿದ್ದರಿಂದಾಗಿ ಬಸ್‌ ಚಾಲಕ ಸಡನ್‌ ಬ್ರೇಕ್‌ ಹಾಕಿದ್ದಾನೆ. ಇದರಿಂದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.  ಖಾಸಗಿ ಬಸ್‍ನಲ್ಲಿದ್ದ ಸುಮಾರು 6 ಮಂದಿಗೆ ಗಂಭೀರ ಗಾಯವಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಬೀದರ್ ತಾಲೂಕಿನ ಅಣದೂರು ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಬ್ರಿಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿದೆ.

 

Share Post